Saturday, October 31, 2009

ಸಮ್ಮಿಲನ...

ಹೂಗಂಧದ ಪರಿಮಳದಿ
ಮುಂಜಾವಿನ ಪರಿಸರದಿ
ತಂಗಾಳಿ ಆವರಿಸಿ, ಮನವನ್ನು ಶೃಂಗರಿಸಿ
ತಾಯಿ ನಿನ್ನ ಮಡಿಲಲಿ ಅರಳುತಿದೆ
ಈ ಕವನ
ಮೂಡುತಿವೆ ಬಣ್ಣಗಳು ಆಕಾಶದಿ ಹಲವಾರು
ಹಾರುತಿವೆ ಹಕ್ಕಿಗಳು ಬಾನೆತ್ತರದಿ ನೂರಾರು
ಅರಳುತಿವೆ ಕನಸುಗಳು ಮನದಾಳದಿ ಸಾವಿರಾರು
ಕಾಯುವುದು ಈ ಲೋಕ
ಆ ರವಿಯ ಬರುವಿಕೆಗೆ
ಪ್ರತಿಭೆ ತುಂಬಿದ ಹೃದಯಗಳ ಹಿಡಿದು
ಮನಸನ್ನು ನಿರ್ಮಲಗೊಳಿಸುವೆ ನೀ ತಾಯೆ
ನಿನ್ನಂತೆ ನಡೆಯುವೆವು ನಮ್ಮನ್ನು ಕಾಯೆ
ಪ್ರಕೃತಿಯ ಓ ಮಾತೆ ಶರಣಾದೆ ನಿನಗೆ
ದೇಹಕ್ಕೆ ಉಸಿರಾಗಿ ನಡೆಸುವೆ ನೀ ಮುಂದೆ
ನಿನಗೆದುರಾಗಿ ನಿಂತರೆ ನಾವೆಲ್ಲಾ ಹಿಂದೆ
ಮಿತಿ ಮೀರಿ ನಡೆದರೆ ಮರಣ ಒಂದೇ.
- ವಾಸು (ಅಂತಿಮ ಬಿ.ಎ, ಪತ್ರಿಕೋದ್ಯಮ)

No comments: