Wednesday, December 17, 2008

20ರಂದು ವ್ಯಾಸಪಥ ಬಿಡುಗಡೆ

ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿರ್ದೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.