Wednesday, December 17, 2008

20ರಂದು ವ್ಯಾಸಪಥ ಬಿಡುಗಡೆ

ಗೋ ವಿಂದ ದಾಸ ಕಾಲೇಜು, ಸುರತ್ಕಲ್ , ಭಾಷಾ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಹರೀಶ್ ಕೆ. ಆದೂರು ನಿರ್ದೇಶನದ `ವ್ಯಾಸಪಥ' ಕಥೆಗಾರ ಎಂ.ವ್ಯಾಸ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಇದೇ 20ರಂದು ಗೋವಿಂದ ದಾಸ ಕಾಲೇಜಿನ ದೃಶ್ಯ ಶ್ರಾವ್ಯ ವಿಭಾಗದಲ್ಲಿ ಬೆಳಗ್ಗೆ 10.30 ನಡೆಯಲಿದೆ.
ಸಾಹಿತಿ ಡಾ.ಮಹಾಲಿಂಗ ಭಟ್ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.
ಅತಿಥಿಗಳಾಗಿ ಡಾ. ವರದರಾಜ ಚಂದ್ರಗಿರಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ.ರಾಜಮೋಹನ್ ರಾವ್ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

Friday, October 3, 2008
















































































ನೃತ್ಯ ಸಿಂಗಾರ: ಫಲಿತಾಂಶ ವಿವರ

ಸುರತ್ಕಲ್, ಅ.3-ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ನೃತ್ಯ ಸಿಂಗಾರ - 2008' ರ ಕ್ರಿಯೆಟಿವ್ ಡ್ಯಾನ್ಸ್ ಕಾಂಪಿಟೀಶನ್ ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇದರ ಕಾವ್ಯ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.ಮಂಗಳೂರು ಕ್ಯಾಂಪಸ್ನ ಮಧುಸೂದನ್ ದ್ವಿತೀಯ ಹಾಗೂ ಎಸ್.ಡಿ.ಎಂ ಕಾಲೇಜ್ ಆಫ್ ಬ್ಯುಸಿನೆಸ್ ಮೇನೇಜ್ ಮೆಂಟ್ ಮಂಗಳೂರು ಇದರ ಸ್ಮಿತಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.ಶಾಸ್ತ್ರೀಯ ನೃತ್ಯ ಮಂಗಳೂರು ಸಂತ ಆಗ್ನಸ್ ಕಾಲೇಜಿನ ನಿಶಿತಾ ಪ್ರಥಮ, ಆಳ್ವಾಸ್ ಮೂಡಬಿದಿರೆಯ ಮಾಳವಿಕ ದ್ವಿತೀಯ ಹಾಗೂ ಸಂದೇಶ ಲಲಿತಕಲಾ ಕಾಲೇಜು ಬಿಜ್ಜೋಡಿ ಇದರ ನವ್ಯಶ್ರೀ ಮತ್ತು ಉಡುಪಿ ಎಂ.ಜಿ.ಎಂ ಕಾಲೇಜಿನ ಶ್ರೀಪ್ರಜ್ಞಾ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.























Thursday, October 2, 2008

`ಪ್ರಶಸ್ತಿಯೇ ಪ್ರಾಮುಖ್ಯವಲ್ಲ'

`ನೃತ್ಯ ಸಿಂಗಾರ - 2008'


ಸುರತ್ಕಲ್, ಅ.3- ಪ್ರಶಸ್ತಿಯೇ ಪ್ರಾಮುಖ್ಯವಾಗಿರಬಾರದು. ಸೋಲು - ಗೆಲುವು ಸಾಮಾನ್ಯ. ಭಾಗವಹಿಸುವಿಕೆ ಎಂಬುದು ಅತ್ಯಂತ ಮುಖ್ಯವಾದುದು ಎಂದು ಹಿರಿಯ ನೃತ್ಯ ಕಲಾವಿದ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ `ನೃತ್ಯ ಸಿಂಗಾರ - 2008' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಂಗಳೂರು ವಿಶ್ವವಿದ್ಯಾನಿಲಯದ ಒಂದು ಸಾಂಸ್ಕೃತಿಕ ತಂಡವನ್ನು ರೂಪಿಸುವ ದೃಷ್ಠಿಯಿಂದ `ನೃತ್ಯ ಸಿಂಗಾರ' ಆಯೋಜಿಸಲಾಗಿದೆ ಎಂದು ಡಾ.ಕೆ ಚಿನ್ನಪ್ಪ ಗೌಡ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಎಂ.ಎಸ್ ಕೃಷ್ಣ ಭಟ್ ವಹಿಸಿದ್ದರು.ಕಾಲೇಜಿನ ಸಂಚಾಲಕ ವೆಂಕಟ್ರಾವ್, ಉಪನ್ಯಾಸಕ ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು.ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ರಾಜ್ ಮೋಹನ್ ರಾವ್ ಸ್ವಾಗತಿಸಿದರು. ಜ್ಯೋತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ.ದೇವಪ್ಪ ಕುಳಾಯಿ ವಂದಿಸಿದರು.

Friday, August 29, 2008

ಮಕ್ಕಳ ಧ್ವನಿಗೆ ವೈಭವದ ಚಾಲನೆ

ಸುರತ್ಕಲ್, ಆ30- ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ ಆಯೋಜಿಸಲಾದ 15ನೆಯ ಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಮೂಡಬಿದ್ರೆಯ ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಚಾಲನೆ ನೀಡಿದರು.ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ್ದ ವಿದ್ಯಾರ್ತಿಗಳಿಂದ ತುಂಬಿದ್ದ ವಿದ್ಯಾದಾಯಿನೀ ಪ್ರೌಢಶಾಲಾ ವಜ್ರಮಹೋತ್ಸವ ಸಭಾಂಗಣ ಅಕ್ಷರಶಃ ಮಕ್ಕಳ ಧ್ವನಿಗೆ ಸಾಕ್ಷಿಯಾಯಿತು.ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಐ.ರಮಾನಂದ ಭಟ್ ಆಶೀರ್ವಚನ ನೀಡಿದರು.ಸಮ್ಮೇಳನಾಧ್ಯಕ್ಷ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ ಉಪಸ್ಥಿತರಿದ್ದರು. ಹರಿಕೃಷ್ಣ ಪುನರೂರು ಸ್ಮರಣ ಸಂಚಿಕೆ ಅನಾವರಣ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಪಿ ಸುಚರಿತ ಶೆಟ್ಟಿ, ಸಿ.ಚಾಮೇ ಗೌಡ, ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.ವಿಶೇಷ ರೀತಿಯ ಉದ್ಘಾಟನೆಗೆ 15ನೆಯ ಮಕ್ಕಳ ಧ್ವನಿ ಸಾಕ್ಷಿಯಾಯಿತು. ವಿದ್ಯಾರ್ತಿಗಳಿಂದ ಹಚ್ಚೇವು ಕನ್ನಡ ದೀಪ ಹಾಡು ಹಾಡುತ್ತಿದ್ದಂತೆಯೇ ಉದ್ಘಾಟಕರು ದೀಪ ಬೆಳಗಿ ಚಾಲನೆ ನೀಡಿದರು. ಸೇರಿದ್ದ ಸಾಹಿತ್ಯಾಭಿಮಾನಿಗಳ ಕರತಾಡನ ಮೆರುಗು ಹೆಚ್ಚಿಸಿತು.ಸ್ವಾಗತ ಸಮಿತಿ ಪಿ.ಕೃಷ್ಣ ಮೂತರ್ಿ ಸ್ವಾಗತಿಸಿದರು. ಬಿ.ಶ್ರೀನಿವಾಸ್ ರಾವ್ ಪ್ರಸ್ತಾವಿಕ ಮಾತುಗಳನ್ನಾಡಿದರು. ವಾಮನ ಇಡ್ಯಾ ವಂದಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳಿಂದ ಗೀತ ಗಾಯನ ಕುಂಚ ನರ್ತನ ಕಾರ್ಯಕ್ರಮ ನಡೆಯಿತು.


ಅವಿಸ್ಮರಣೀಯ ಅನುಭವ : ಮಂಜುನಾಥ ಹೆಗಡೆ

ಸುರತ್ಕಲ್, ಆ.30- `15ನೆಯ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷ ಪಟ್ಟ ನನಗೆ ಸಿಕ್ಕಿದ್ದು ನನ್ನ ಭಾಗ್ಯ . ಇದೊಂದು ಅವಿಸ್ಮರಣೀಯ ಅನುಭವ' ಹೀಗೆಂದವರು 15ನೆಯ ಮಕ್ಕಳ ಧ್ವನಿ ಕಾರ್ಯಕ್ರಮದ ಅಧ್ಯಕ್ಷ ಮೂಡಬಿದ್ರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ತಿ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ.`ಹೊಂಗಿರಣ' ವೆಬ್ ಸೈಟ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.ಭ್ರಮೆ ಬೇಡ, ನಿಜವಾದ ಕ್ರಿಯೆ ಬೇಕು. ಸಾಹಿತ್ಯವನ್ನು ಜನ ಸೇವೆಗಾಗಿ ಮುಡಿಪಿಡುವ ಕಾರ್ಯ ಆಗಬೇಕು, ಈ ನಿಟ್ಟಿನಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.ಇದೊಂದು ಅಪೂರ್ವ ಅವಕಾಶ ನನಗೆ ಒದಗಿ ಬಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವ ಒಂದು ವಿಶ್ವಾಸ ನನಗಿದೆ.ಪ್ರತಿಯೊಬ್ಬ ವಿದ್ಯಾರ್ತಿಯಲ್ಲೂ ಪ್ರತಿಭೆ ಇದ್ದೇ ಇದೆ. ಇದನ್ನು ಪ್ರಚುರ ಪಡಿಸುವ ಕಾರ್ಯ ಆಗಬೇಕಾಗಿದೆ. ಇದಕ್ಕೆ ಮಕ್ಕಳ ಧ್ವನಿ ಪೂರಕ ಎಂದರು.


`ಸಾಹಿತ್ಯ ಅಂತರಾಳದ ಸಂಗೀತ'

ಸುರತ್ಕಲ್, ಆ.30- ಸಾಹಿತ್ಯ ಭಾವನೆಗಳ ಪ್ರವಾಹ. ಅಂತರಾಳದ ಸಂಗೀತ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಅನಿವಾರ್ಯ . ಒಬ್ಬ ವ್ಯಕ್ತಿಯನ್ನು ರೂಪಿಸಬಲ್ಲ, ಬೆಳೆಸಬಲ್ಲ ಅಪೂರ್ವ ಶಕ್ತಿ ಸಾಹಿತ್ಯಕ್ಕಿದೆ ಎಂದು 15ನೇ ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುಬ್ರಹ್ಮಣ್ಯ ಮಂಜುನಾಥ ಹೆಗಡೆ ಹೇಳಿದರು.ಸಾಹಿತ್ಯ ವ್ಯಕ್ತಿಯನ್ನು ಪ್ರಜ್ಞಾವಂತ ನಾಗರಿಕನನ್ನಾಗಿ ರೂಪಿಸುತ್ತದೆ. ವಿಷಯವೊಂದನ್ನು ಸಾವಿರ ಕೋನಗಳಲ್ಲಿ ವಿಮಶರ್ಿಸಬಲ್ಲ ಯುವ ಮನಸ್ಸು ಪ್ರಜ್ಞಾಶೀಲವಾಗುವುದರ ಜೊತೆಗೆ ಆಧುನಿಕ ಸಮಾಜದ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಿದರು.ದುಃಖವನ್ನು ನುಂಗಿಕೊಂಡು ಸುಖವನ್ನು ಜನರಿಗೆ ಹಂಚುವುದೇ ನಿಜವಾದ ಸಾಹಿತ್ಯ ಎಂದು ಅವರು ವಿಶ್ಲೇಷಿಸಿದರು.ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆಯ ಅಭಿವ್ಯಕ್ತಿಗೆ ಸಾಹಿತ್ಯ ಒಂದು ಮಾಧ್ಯಮ. ಆದ್ದರಿಂದ ಸಾಹಿತ್ಯವನ್ನು ಜನಸೇವೆಗಾಗಿ ಮುಡಿಪಿಡುವ ಕಾರ್ಯ ಆಗಬೇಕಾಗಿದೆ ಎಂದವರು ಹೇಳಿದರು.


ಮಕ್ಕಳ ಧ್ವನಿಗೆ ಹೊಂಬೆಳಕಿನ ಸ್ವಾಗತ

ಸುರತ್ಕಲ್, ಆ.30- ಮಕ್ಕಳ ಧ್ವನಿ ಸಮ್ಮೇಳನಕ್ಕೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ತಿಗಳು `ಹೊಂಬೆಳಕು' ಭಿತ್ತಿ ಪತ್ರಿಕೆಯ ವಿಶೇಷ ಪುರವಣಿಗಳನ್ನು ಹೊರತಂದು ಸರ್ವರ ಪ್ರಶಂಸೆಗೆ ಪಾತ್ರರಾದರು.ಸಮ್ಮೇಳನ ಉದ್ಘಾಟನೆಗೊಳ್ಳುತ್ತಿದ್ದಂತೆಯೇ ಉದ್ಘಾಟನಾ ಸಮಾರಂಭವೂ ಸೇರಿದಂತೆ ಸಮ್ಮೇಳನದ ವೈಶಿಷ್ಠ್ಯಪೂರ್ಣ ಮಾಹಿತಿ ನೀಡುವ ಕಾರ್ಯ ಭಿತ್ತಿಪತ್ರಿಕೆಯ ಮೂಲಕ ನಡೆದಿದೆ.

Wednesday, August 13, 2008

ಜೋಗಿ...ಯೊಂದಿಗೆ ಒಂದು ದಿನ...
ಸುರತ್ಕಲ್: ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಏರ್ಪಡಿಸಲಾದ `ಮಾಧ್ಯಮ' ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ , ಸಿನೆಮಾ ನಿರ್ದೇಶಕ, ಎಚ್. ಗಿರೀಶ್ ರಾವ್ (ಜೋಗಿ) ಭಾಗವಹಿಸಿ ವಿದ್ಯಾರ್ತಿಗಳೊಂದಿಗೆ ಸಂವಾದ ನಡೆಸಿದರು.


































































Wednesday, August 6, 2008

ಮುಗಿಲುಗಳು...
ಚಿರಯೌವನದ ಹೊಸ್ತಿಲಲ್ಲಿ
ಕನಸ ಕಾಣುತ, ನಸು ನಗುವಿನ ಛಾಯೆ...
ಹೊಂಗನಸ ಪಡೆಯುವ ನಿರೀಕ್ಷೆ...
ಚಿಮ್ಮಿದೆ ನನ್ನ ಮನದಲ್ಲಿ...
ಅಂತರಾತ್ಮದ ಭಾವನೆಗಳ
ಮುಚ್ಚಿಡಲು ಬಯಸೆ
ಸಂಬಂಧಗಳ ಹುಡಕಾಟ ತೊಡಕಾಟ
ನನ್ನ ಮನದಲ್ಲಿ ಇದೆ ನೂರೊಂದು ಆಸೆ...
ಕ್ಷಣಕಾಲದಲ್ಲಿ ಕೇಳಿತು...
ಆ ಮುಗಿಲಿನ ಆರ್ಭಟ
ತನ್ನೊಡಲನ್ನು ನುಚ್ಚು ನೂರು ಮಾಡಿ
ತನ್ನ ದೇಹವನ್ನು ಪುಡಿ ಪುಡಿ ಮಾಡಿತು
ಜೊತೆಯಲ್ಲಿ ಕಣ್ಣೀರ ಧಾರೆ
ಇದೇಕೆ..???
ವಿರಹದ ಬೇಗೆಯನ್ನು ತಡೆಯಲಾಗದೆ
ಸನಿಹಕ್ಕೆ ಇಳಿದು
ಒಂದಾಗುತಲೆ ಕೇಳಿತು ಅಲ್ಲಿ
ಜಗಳ, ಜಂಜಾಟ, ಸದ್ದು, ಸಿಡಿಲು
ಪ್ರಿಯತಮನ ಮೊರೆಹೋಗಿ
ತನ್ನ ಜೀವನವೇ ಕರಗಿ ನೀರಾಗಿ ಹೋದವು
ಇದೇ ಮುಗಿಲಿನ ಕೊನೆ
ಮತ್ತೆ ಮರು ಜನ್ಮವೆತ್ತಿ...
ಪುನಃ ಆಕಾಶಕ್ಕೆ ಏರಿ ತನ್ನ ಜೀವನದ
ಸಾಗಾಟ ಮುಂದುವರಿಸಿತು ಆ ಮುಗಿಲು
ಇದೇ ಮುಗಿಲಿನ ಚಕ್ರವ್ಯೂಹ
ಮನಸ್ಸಿನ ನೂರು ಆಸೆ
ಪ್ರೀತಿ, ಮೋಹಗಳ ಮಿಶ್ರಣ
ಭವಿಷ್ಯವನ್ನು ತಿಳಿಯಲಾಗದ ಪರಿಸ್ಥಿತಿ
ಕಣ್ಣೀರು ಹಾಕುವ ಘಳಿಗೆ
ಬಂದೇ ಬರುವುದು ನಮಗೆ ಆ
ಮುಗಿಲಿನ ಹಾಗೆ...
- ಜ್ಯೋತಿ.

ಇವು ಹೀಗೇ...
ಬ್ಬರದಿ ಸಾಗುತಿಹ ಮುಗಿಲುಗಳೇ...
ಒಮ್ಮೆ ನಿಂತು ನೋಡುವಿರಾ...
ಬಿಸಿಲ ಬೇಗೆಗೆ ಬೆಂದ ಹೃದಯವು...
ನೋಡುತಿದೆ ನಿಮ್ಮತ್ತ ತುಂಬು ನಿರೀಕ್ಷೆಯಲಿ...
ಕಲ್ಲು ಹೃದಯವು ಬೇಡ...ಹುಸಿಮುನಿಸು ಬೇಡ...
ನೊಂದ ಜೀವಕೆ ಹನಿಸುವಿರಾ..ನಾಲ್ಕು ಹನಿಯ...
ಚಂದಮಾಮನ ಅಡಗಿಸದಿರಿ..
ಜಂಭದಿ ಮೆರೆಯದಿರಿ...
ಮಳೆಯಾಗಿ ಕರಗಿ ಇನ್ನಿಲ್ಲವಾಗುವ ಆ ಸತ್ಯಕೆ...
ಸಾಕ್ಷಿಯಾಗುವಿರಿ ನೀವೂ ಒಂದು ದಿನ ಈ ಮನುಜನಂತೆ...
- ಹಿತಾ ಎಸ್.ಶೆಟ್ಟಿ

ಓ ಮುದ್ದು ಮುಗಿಲೆ..
ಮುಗಿಲೆ ನೀನೇಕೆ ಓಡುವೆ...
ನಿನ್ನ ಬಾಳ ಪಯಣವೇ ಹೀಗೆ...
ಪ್ರಕೃತಿಯ ಅಲಂಕರಿಸಿ
ಕಲ್ಲುಮನ ಖುಷಿಪಡಿಸುವೆ
ನಿಂತಲ್ಲಿ ನಿಲ್ಲದೆ ಹೋಗುತಿಹೆನೀ
ಸುಖಃ ದುಖಃ ಕಂಡೆ ನಾ ನಿನ್ನಲ್ಲಿ
ನೀನಿಲ್ಲದೆ ಬರವಿಲ್ಲ
ನಿಂತು ನೋಡು ನೀನೊಮ್ಮೆ ಧರೆಯಲ್ಲಿ...
ಕಪ್ಪುಬಿಳುಪಿನ ನಿನ್ನ ಬಣ್ಣವು ಹೇಗೋ
ಜನ ಸಮೂಹದ ಮನಸ್ಸಿನ ಬಣ್ಣವೂ ಹಾಗೆ
ತಳಮಳದ ಸಂಶಯ ಕಾಡುತಿಹುದಿಲ್ಲಿ...
ನಿನ್ನ ನೋಡಿದರೆ ಅಳುನಿಲ್ಲುವುದು
ಅದೇ ನೀ ಓಡಿದರೆ ದುಃಖವೇ ಆವರಿಸುವುದು..
ನಿನ್ನ ಸೆಳೆತಕೆ ಒಳಗಾಗುವುದು ಹಲವುಮನ
ನೀ ಬಂದು ನೋಡಿಹೋಗುವ ಹಾಗೆ
ಮಾನವನ ಜೀವನ್ಮರಣವು ಹಾಗೆ..
ಒಂದೊಮ್ಮೆ ಭೂಮಿಯಲಿ ನಿಂತು ಹೋಗುವರು
ನಿನ್ನಂತರಾಳದಲಿ ಪ್ರಗತಿಯನು ನಾ ಕಂಡೆ
ಆ ಪ್ರಗತಿಯೇ ನನ್ನ ಜೀವನಕೆ ತುಂಬಿದೆ...
ಓ ನನ್ನ ಮುಗಿಲೆ ಓ ಮುದ್ದು ಮುಗಿಲೆ..
- ವಾಸು.
ನಾನಾಗುವ ಆಸೆ...
ಬೆಳ್ಮುಗಿಲೇ...
ನಿನ್ನೆದೆಯಲ್ಲಿ ಕುಣಿದಾಡುವ ಮಗು
ನಾನಾಗುವಾಸೆ...
ನಿನ್ನೊಡಲಿ ಮಿನುಗುವ
ಚುಕ್ಕಿ...ತಾರೆ...ನಾನಾಗುವಾಸೆ..
ವಿಶಾಲವಾದ ಸಾಗರಕ್ಕಿಂತ ದೊಡ್ಡದು
ಆ ನಿನ್ನ ಹೃದಯ
ಆ ನಿನ್ನ ಹೃದಯ ವಿಶಾಲೆತೆಯ ಕಂಡು
ನಾನಾದೆ ಬೆರಗು...
ನಿನ್ನ ಆ ಬಿಳಿ ಮೈಯಲ್ಲಿ ಕರಿಮೋಡಗಳ
ಚಿತ್ತಾರ ಕವಿಗಳಿಗೆಲ್ಲ ಸ್ಪೂತರ್ಿ..
ಸೂರ್ಯ ಕಿರಣಗಳ ವರ್ಣ ವೈಭವಕೆ
ನೀ ತೋರುವೆ ನಸು ನಾಚಿ..
ಅದೆಷ್ಟೂ ಮಳೆಹನಿಗಳ ನಿನ್ನೊಡಲಲಿ
ತುಂಬಿ...
ನೀ ತರುವೆ ಇಳೆಗೆ ತಂಪು ಮಳೆಯ...
ಮುಸ್ಸಂಜೆ ಕಾಲದಲ್ಲಿ ಹಕ್ಕಿಗಳ ಸಾಲು..
ಹಿಂಡು ಹಿಂಡಾಗಿ ಸಾಗುವ ಆ ಪರಿಯ
ನಿನ್ನ ಸೌಂದರ್ಯ ಕಾಂತಿಯ ಇಮ್ಮಡಿಗೊಳಿಸಿದೆ...
ಆ ಕಾಂತಿಯ ಕಂಡು
ವರ್ನಿಸಲಾರದಾದೆನು ನಾನು...
- ಅಶ್ವಿನಿ ಆರ್.

ನೀಲ ಮೇಘ ಶ್ಯಾಮನು

ಣ್ಣು ಮುಚ್ಚಿ ಕಣ್ ತೆರೆಯಲು

ಬೆಳಕ ತೋರಿತ್ತು ಮುಗಿಲು

ಆ ನೀಲ ಮೇಘ ಶ್ಯಾಮನು
ಕ್ಷಣ ಮಾತ್ರದಲಿ ಬರಲು
ಮುಗಿಲಲ್ಲಿ ಮೂಡಿತ್ತು ಚಿತ್ತಾರದ ಹೊನಲು
ಮನದಲ್ಲೂ ಮೂಡಿತ್ತು ಚಿತ್ತಾರಗಳು
ಎದೆಯಲ್ಲಿ ನಾಟ್ಯವಾಡಿತ್ತು ನವಿಲು
ಮುಗಿಲಲ್ಲಿ ನೀಲ ಮೇಘನು ಕಾಣಿಸುತ್ತಿರಲು
ಬಂದೇ ಬಿಟ್ಟಿತು ಗುಡುಗು, ಸಿಡಿಲು
ಅಪ್ಪಿ ಹಿಡಿವಂತೆ ಮುಗಿಲು ಸುತ್ತಲೂ
ಒಂದಾಯಿತೇ ಮುಗಿಲೂ ಸಿಡಿಲ
ಹೊತ್ತುರಿಯುವಂತೆ ಎನ್ನ ಒಡಲು
ಇನ್ನೆಲ್ಲಿ ನನ್ನ ನೀಲ ಮೇಘನು
ಕೇಳದಾಯಿತೆ ಅವನಿಗೆನ್ನ ಅಳಲು...
ಅದೇಕೋ ಅನಿಸಿತು ಬೆಳಕ ತೋರಿತ್ತೆ ಮುಗಿಲು
ಇಲ್ಲ... ಕವಿಯೊತೊಡಗಿತೇ ಕತ್ತಲು..
ಕಾಮರ್ುಗಿಲು...ಎನ್ನ ಬಾಳಲೂ...
ಹ್ಹಾಂ... ನನ್ನ ಬಾಳಲೂ...
- ಮೋದಾಕ್ಷಿ...
ಓ ನನ್ನ ಮುಗಿಲುಗಳೇ...
ಬಾ ನಿನಂಗಳದಲ್ಲಿ
ಬಿಳಿ ಕಪ್ಪು ರಂಗಿನಲಿ...
ಚಿತ್ತಾರ ಬಿಡಿಸುತಿಹ
ಆಗಸದಿ ಮನೆ ಮಾಡಿರುವ
ಓ ನನ್ನ ಮುಗಿಲುಗಳೇ
ಓ ನನ್ನ ಮುಗಿಲುಗಳೇ...
ರವಿ, ಚಂದ್ರ, ಗ್ರಹ, ತಾರೆ ನಿನ್ನ ಸಂಗಾತಿಗಳೋ...
ಹಾರುವ ಹಕ್ಕಿಗಳು ನಿನ್ನ ಒಡನಾಡಿಗಳೋ...
ದಿಗಂತದ ಅಂಚಿನಲಿ ನಿನ್ನ ಆಟ ಪಾಠಗಳೋ...
ಸಾಲು ಸಾಲುಗಳಲ್ಲಿ ನಿನ್ನ ನಡೆದಾಟಗಳೋ...
ಚಲಿಸುವ ಮೋಡಗಳೇ...
ಇಂದು ಭುವಿ ತಾಪದಿ
ಕೊತ ಕೊತ ಕುದಿಯುತಿದೆ..
ವರ್ಷ ಧಾರೆಯ ಹರಿಸಿ
ಹರುಷದ ಹೊಳೆ ಚೆಲ್ಲಿ
ಧರೆಗಿಳಿದು ಬನ್ನಿ... ಧರೆಗಿಳಿದು ಬನ್ನಿ
ಓ ನನ್ನ ಮುಗಿಲುಗಳೇ..
- ಪರಿಣಿತ ಎಸ್...
ಮುಗಿಲಿನೆಡೆಗೆ...
ನ್ನಾಸೆಯ ಹಕ್ಕಿಯನು
ಹಾರಬಿಟ್ಟೆ ನಾ ಮುಗಿಲಿನೆಡೆಗೆ
ರೆಕ್ಕೆಯನು ಬಡಿಯುತ್ತಾ ಸಾಗಿತದು
ತನ್ನ ಗರಿಯ ಬಿಚ್ಚಿ ಪಟ ಪಟನೆ...
ಆದರೊಂದು ಅಳುಕಿತ್ತು ಅದೇ...
ತುಲುಪುವೆನೋ ಗುರಿಯಾ...?
ಮನದಲಿ ಸಂತಸ ಮೂಡಿತ್ತು..
ನಾ ಸೇರುವೆನು ಗುರಿಯ..
ಬಂದ ಹಕ್ಕಿಗಳ ಬಳಗ
ಹೀಯಾಳಿಸಿತು ನೀ ಒಂಟಿ
ಸಾಧಿಸಲಾರೆ ಗುರಿಯಾ...
ದಾರಿ ತಪ್ಪಿ ಹೋಗುವೆ
ಕೆಳಗೆಬಿದ್ದು ಮಣ್ಣಾಗುವೆ ಕೊನೆಗೆ
ನನ್ನಸೆಯ ಹಕ್ಕಿ ಮುನ್ನುಗ್ಗಿತು ಸ್ಥೈಯದಲಿ..
ಹಲವು ಎಡರು ತೊಡರುಗಳ ಸರಿಸಿ
ಕೊನೆಗೂ ಸೇರಿತು ತನ್ನ ಗುರಿಯ
ತನ್ನ ಕುಂದದ ನಿಶ್ಚಲ ಸ್ಥೈರ್ಯದಲಿ...
ತೇಲಿತು ತಾನು ಮುಗಿಲಲೊಂದಾಗಿ...
-ಸೌಮ್ಯ.

ಮುತ್ತಾಗುವುದು...
ಗಸದಲ್ಲಿ ಚೆದುರಿದ
ಮುಗಿಲ ತುಂತುರು ಹನಿ
ಸ್ವಾತಿ ಮಳೆಯಾಗಿ
ಚಿಪ್ಪಿನಲಿ ಬಿದ್ದು ಮುತ್ತಾಗುವುದು
ಭುವಿಯಿಂದ ಆಗಸಕೆ ನೆಗೆದು
ಮತ್ತೆ ಭುವಿಯ ಸೇರುವುದು.
ಸದಾಕಾಲ ತೇಲುತ ಇರುವ
ಮುಗಿಲ ಮುಟ್ಟುವ ಆಸೆ
ಯಾರಿಗಿರದು ...?
ಅಲ್ಲಲ್ಲಿ ನಿಂತು ಮಳೆಯಾಗಿ ಬಂದು
ಮುಟ್ಟುವ ಆಸೆಯ ತೀರಿಸುವುದು.
ವರ್ಷವಾಗಿ ಇಳೆಯ ಪುರೆವ
ಮುಗಿಲು ಕಾಣದಾಗಿದೆ ಎಂದು...
ನಾವೇ ಮೋಡ ಬಿತ್ತುವುದಂತೆ!
ಮುಗಿಲು ಕ್ರುದ್ಧವಾಗಿ ಆಗಸದಲ್ಲಿ
ಸ್ಪೋಟಿಸಿದರೆ ಬಿತ್ತನೆಗೆ ಇರೆವು ನಾವು.
ಓ ಮುಗಿಲೆ ಧಾತ್ರಿಯ ನಮ್ಮನ್ನು
ಸಲಹೇ ಕಾಲಕಾಲಕ್ಕೆ ವರ್ಷವಾಗಿ
ಬಂದು...
ಎಲ್ಲಿಯೂ ಓಡದೆ ತಂಪು ನೀಡಿ
ಸವೆದು ಬುವಿಯ ತಲುಪಿ ಶೋಭೀಸೇ...
- ಅಶ್ವಿನಿ ಐಗಳ್..

Monday, July 14, 2008

`ಹೊಂಗಿರಣ'

ಬ್ಲಾಗ್ ಮಂಡಲದಲ್ಲೊಂದು ಹೊಸ ತಾಣ

ಮಂಗಳೂರು, ಜು.15- ಬ್ಲಾಗ್ ಮಂಡಲಕ್ಕೊಂದು ಹೊಸ ತಾಣದ ಸೇರ್ಪಡೆಯಾಗಿದೆ. ಮಂಗಳೂರಿನ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆಯಾದ `ಹೊಂಗಿರಣ' ಇದೀಗ ಬ್ಲಾಗ್ ಮಂಡಲಕ್ಕೊಂದು ಸೇರ್ಪಡೆಯಾಗಿದೆ.

ಮಂಗಳೂರು ಆಕಾಶವಾಣಿಯ ಸಹಾಯಕ ಕೇಂದ್ರ ನಿರ್ದೇಶಕ ಶಿವಾನಂದ ಬೇಕಲ್ ಮಂಗಳವಾರ ಬ್ಲಾಗ್ ಅನಾವರಣಗೊಳಿಸಿ, ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿಯಾಗುತ್ತಿದ್ದು, ಇದೀಗ ಪತ್ರಿಕೋದ್ಯಮ ವಿಭಾಗದ, ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ರಾಜಮೋಹನ ರಾವ್ ಅಧ್ಯಕ್ಷತೆ ವಹಿಸಿದರು. ವಿಭಾಗದ ಉಪನ್ಯಾಸಕಿ ಅಕ್ಷತಾ ಸಿ.ಎಚ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂಪಾದಕೀಯ...

ನಾವು ನಡೆದು ಬಂದ ಹಾದಿ

ವಿದ್ಯಾರ್ಥಿ ಜೀವನ ಪ್ರತಿಭೆಗಳನ್ನು ಅನಾವರಣಗೊಳಿಸುವ ಪರ್ವಕಾಲ. ವಸಂತ ಮಾಸದಲ್ಲಿ ಮೊಗ್ಗೊಡೆದು ಬಿರಿಯುವ ಪುಷ್ಪಗಳಂತೆ ಈ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಅಂತರ್ಗತಗೊಂಡಿರುವ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಜೀವನದ ಗುರಿಯನ್ನು ಸಾಧಿಸುವ ಅದಮ್ಯ ಹುಮಸ್ಸು, ಪ್ರಪಂಚವನ್ನೇ ಗೆಲ್ಲುವ ಆತ್ಮವಿಶ್ವಾಸ ಇವರಲ್ಲಿ ಪುಟಿದೇಳುತ್ತಿರುತ್ತವೆ. ವಿದ್ಯಾರ್ಥಿ ಜೀವನ ಸಾಧನಾ ಜೀವನ. ಈ ಹಂತದಲ್ಲಿ ಅವರು ಸಾಧಿಸಿದ ಸಾಧನೆಗಳು ಜೀವನದುದ್ದಕ್ಕೂ ಅವರಿಗೆ ದಾರಿದೀಪವಾಗುವುದು. ಹಾಗಾಗಿ ಈ ಕಾಲದಲ್ಲಿ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಆದ್ಯ ಕರ್ತವ್ಯ ವಿದ್ಯಾಸಂಸ್ಥೆಗಳದ್ದು.
ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹೊಸ ಹೊಸ ಹೆಜ್ಜೆಗಳನ್ನಿರಿಸುತ್ತಿದೆ. ಕೇವಲ ಮೂರು ವರುಷಗಳ ಹಿಂದಷ್ಟೇ ಪ್ರಾರಂಭಗೊಂಡ ನಮ್ಮ ವಿಭಾಗ ಇನ್ನೂ ಪುಟ್ಟ ಕೂಸು. ಸಾವಿರ ಕನಸುಗಳೊಂದಿಗೆ ಹುಟ್ಟಿಕೊಂಡ ಇದು ಭವಿಷ್ಯದಲ್ಲಿ ನನಸಾಗಿಸಬೇಕಾದ್ದು ಬೆಟ್ಟದಷ್ಟಿದೆ. ಶೈಕ್ಷಣಿಕ ಜಗತ್ತಿನ ಬದಲಾವಣೆಗಳಿಗನುಗುಣವಾಗಿ ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಚಿಂತನೆಯನ್ನು ಹಲವು ವರ್ಷಗಳ ಹಿಂದೆ ನಮ್ಮ ಕಾಲೇಜಿನ ಆಡಳಿತ ಮಂಡಳಿ ನಡೆಸಿತ್ತು. ಪರಿಣಾಮ 2005-2006ನೇ ಶೈಕ್ಷಣಿಕ ವರ್ಷದಲ್ಲಿ 'ಪತ್ರಿಕೋದ್ಯಮ'ವನ್ನು ಬಿ.ಎ ಪದವಿಗೆ ಐಚ್ಚಿಕ ವಿಷಯವನ್ನಾಗಿ ಪರಿಚಯಿಸಲಾಯಿತು. ವಿದ್ಯಾರ್ಥಿ ಗಳಿಗೆ ತೀರಾ ಹೊಸದಾಗಿರುವ ಈ ವಿಷಯದ ಕುರಿತು ಅರಿವು ಮೂಡಿಸುವ ಸಲುವಾಗಿ ವಿಭಾಗದ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತು. ಪ್ರಾರಂಭದಲ್ಲೇ ವಿಭಾಗದ ಎಲ್ಲಾ ಚಟುವಟಿಕೆಗಳಿಗೆ ವಿದ್ಯಾಥರ್ಿಗಳು ಉತ್ತಮವಾಗಿ ಸ್ಪಂದಿಸತೊಡಗಿದರು .ತಮ್ಮ ಸ್ಪ್ತಂದನೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುವ ಪ್ರಯತ್ನವನ್ನೂ ಮಾಡಿದರು. ಆ ಪ್ರಯತ್ನದ ಫಲವೇ 'ವಿದ್ಯಾದರ್ಪಣ'. 2006ರಲ್ಲಿ ಪ್ರಾರಂಭಗೊಂಡ ಈ ಪ್ರಯೋಗಿಕ ಪತ್ರಿಕೆ ವಿದ್ಯééಾಥರ್ಿಗಳಲ್ಲಡಗಿದ ಸುಪ್ತ ಬರವಣಿಗೆಯ ಪ್ರತಿಭೆಯನ್ನು ವ್ಯಕ್ತಪಡಿಸಲು ಸೂಕ್ತವೇದಿಕೆಯಾಗಿ ಹೊರಹೊಮ್ಮಿತು. ನಮ್ಮ ವಿದ್ಯಾಥರ್ಿಗಳ ಸಹಕಾರ ಹಾಗೂ ಯುಕ್ತ ಸ್ಪಂದೆಯಿಂದ ಪತ್ರಿಕೆ ಇಂದು ಯಶಸ್ವಯಗಿ ಎರಡು ಸಂಪುಟಗಳನ್ನು ಪೂರೈಸಿದೆ.
ಕೇವಲ ಹದಿಮೂರು ವಿದ್ಯಾಥರ್ಿಗಳಿಂದ ಪ್ರಾರಂಭಗೊಂಡ ನಮ್ಮೀ ವಿಭಾಗ ಪ್ರಸ್ತುತ ನಲವತ್ತಾರು ಯುವ,ಆಕಾಂಕ್ಷಿ ವಿದ್ಯಾರ್ಥಿ ಗಳನ್ನು ಹೊಂದಿದೆ.ಪಠ್ಯವಿಷಯಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಗಿದ್ದು ವಿಭಾಗಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಾಲೇಜು ಕಲ್ಪಿಸಿದೆ.
ವೈಚಾರಿಕ ಪ್ರಜ್ಞೆ ಪತ್ರಿಕೋದ್ಯಮ ವಿದ್ಯಾಥರ್ಿಯಲ್ಲಿರಬೇಕದ ಪ್ರಮುಖ ಗುಣ.ಆತ ತನ್ನ ಸಮಜದ ಆಗುಹೋಗುಗಳನ್ನು ಗಮನಿಸಿ ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು. ವಿದ್ಯಾರ್ಥಿಗಳ ಸ್ಪಂದನೆಗಳನ್ನು ಹೊರಜಗತ್ತಿಗೆ ತಲುಪಿಸುವ ಮತ್ತೊಂದು ಕಿರು ಪ್ರಯತ್ನವೇ ನಮ್ಮ ನೂತನ ಬ್ಲಾಗ್ 'ಹೊಂಗಿರಣ'.ಈ ಬ್ಲಾಗ್ ವಿದ್ಯಾರ್ಥಿಗಳ ಬರಹ-ಸಂವೇದನೆಗಳನ್ನು ಹೊರಜಗತ್ತಿಗೆ ತಲುಪಿಸುವುದರ ಜತೆ ಅವರ ವೈಚಾರಿಕ ನೆಲೆಗಟ್ಟನ್ನು ಇನ್ನಷ್ಟು ಭದ್ರಗೊಳಿಸುವಲ್ಲಿ ಸಹಾಯಕರಿ.ನಮ್ಮ ಈ ವಿನೂತನ ಪ್ರಯತ್ನ ವಿದ್ಯಾರ್ಥಿಗಳ ಅಂತಃಶಕ್ತಿಗೆ ಧ್ವನಿಯಾಗಲಿ,ಅವರಲ್ಲಡಗಿಹ ಪ್ರತಿಭೆಯಾಗಲಿ,ಹೊಸ ಸಾಧನೆಗಳಿಗೆ ನಾಂದಿ ಹಾಡಲಿ ಎಂಬುದೇ ನಮ್ಮೆಲ್ಲರ ಆಶಯ.
- ಸಂಪಾದಕರು.

ಹೀಗೇ ಸುಮ್ಮನೆ...

ಸ್ನೇಹದ ಪಯಣದಲ್ಲಿ

ಗೆಳೆತನ ವೆಂಬುದು ಒಂದು ಪವಿತ್ರ ಬಂಧನ ಬಿಡಿಸಲಾಗದ ಬಂಧನ, ಏನೇ ಹೇಳಿ ಅದು ಗೆಳೆತನದ ಮಹಿಮೆ (ಆಳ)ವನ್ನು ತಿಳಿಸುತ್ತದೆ. ಗೆಳೆತನಕ್ಕಿಂತ ಮಿಗಿಲಾದದ್ದು ಯಾವುದೂ ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಎಲ್ಲವೂ ಗೆಳೆತನದ ಮೂಲಕ ಪ್ರಾರಂಭವಾಗಿ ಮತ್ತೆ ಬೇರೆ ಬೇರೆ ಸಂಬಂಧಗಳು, ಸಂಬಂಧಿಕರು ಎಂಬುದಕ್ಕೆ ನಾಂದಿಯಾಗುತ್ತದೆ. ಗೆಳೆತನ ಒಂದು ಅದ್ಭುತ ಶಕ್ತಿ ಎಂದೂ ಹೇಳಬಹುದು. ಸಾಯುತ್ತಿರುವ ಅಥವಾ ನರಳುತ್ತಿರುವ ವ್ಯಕ್ತಿಗೆ ಗೆಳೆತನದ ಸ್ವರ್ಶವಾದರೆ ಅವನ ಮುಖದಲ್ಲಿ ಅರುಳುವ ಆ ಮಂದಹಾಸ, ಅವನ ಲವಲವಿಕೆ ಇದಕ್ಕೆ ಸಾಕ್ಷಿ. ಗೆಳೆತನ ಎಂಬುದಿಲ್ಲದ್ದರೆ ಈ ಜಗತ್ತೇ ಇಲ್ಲವೆಂದು ಹೇಳಬಹುದು. ಪ್ರತಿಯೊಂದು, ವ್ಯಕ್ತಿಯ ಪರಿಚಯ, ಅವರ ನಡುವೆ ನಡೆಯುವ ಸಂಭಾಷಣೆ, ಅವರು ಇನ್ನೊಮ್ಮೆ ಸಿಕ್ಕಾಗ ಅವರ ಮುಗುಳು ನಗು, ಅವರು ಮತ್ತೊಮ್ಮೆ ಸಿಕ್ಕಾಗ ಸ್ನೇಹ ಭರಿತ ಮಾತು, ಅನಂತರ ಅವರಿಬ್ಬರ ನಡುವೆ ಒಡಮೂಡುವ ಆತ್ಮೀಯತೆ, ಸ್ನೇಹ ಇವೆಲ್ಲವೂ ಅಗಮನೀಯ. ಕೆಲವರಿಗೆ ತಮ್ಮ ಸ್ನೇಹಿತರು ಎಷ್ಟು ಆತ್ಮೀಯರಾಗಿ ಬಿಡುತ್ತಾರೆಂದರೆ ಅವರ ಮೊದಲ ಭೇಟಿಯೇ ನೆನಪಿರುವುದಿಲ್ಲ. ಯಾಕೆಂದರೆ ಅಷ್ಟೊಂದು ಪ್ರೀತಿ, ವಿಶ್ವಾಸ, ಸ್ನೇಹ ಅವರಲ್ಲಿ ಜನುಮ ಜನುಮದ ಬಂಧನವನ್ನು ಏರ್ಪಡಿಸಿ ಬಿಡುತ್ತದೆ. ಇನ್ನು ಕೆಲವರಿಗೆ ಜಗಳ (ದ್ವೇಷ) ದಿಂದ ಪ್ರಾರಂಭವಾದ ಭೇಟಿಯು ಸ್ನೇಹಕ್ಕೆ ತಿರುಗುವುದೂ ಉಂಟು. ಸ್ನೇಹದಲ್ಲಿ ಹಂಚಿಕೊಳ್ಳುವಿಕೆ, ಮುಖ್ಯ ನೊಂದಾಗ ಸಮಾಧಾನ ಹೇಳುವುದು, ಅವರ ಗುರಿಯನ್ನು ಮುಟ್ಟಲು ಸಹಕರಿಸುವುದು, ಹುರಿದುಂಬಿಸುವಿಕೆ, ಸದಾ ಜೊತೆಯಲ್ಲಿದ್ದು ಸುಃಖ ದುಃಖಗಳಲ್ಲಿ ಪಾಲುದಾರನಾಗುವುದು ಅವಶ್ಯ ಇವೆಲ್ಲ ಇದ್ದಾಗಲೇ ಅಲ್ಲಿ ಆರೋಗ್ಯಕರ ಸ್ನೇಹ ಸಾಧ್ಯ. ಸ್ನೇಹ ಬಂಧನ ಕಠೋರ ಹೃದಯದಲ್ಲೂ ಚಿಗುರೊಡೆಯಲು ಸಾಧ್ಯ. ಅದೂ ಎಲ್ಲರಿಗೂ ಲಭ್ಯ, ಅಂದರೆ ಸ್ನೇಹವನ್ನು ಬಯಸುವ ಮನಸ್ಸು, ಸದಾ ತಮ್ಮ ಪ್ರೀತಿ, ದುಃಖ, ಸಂತೋಷ ಕೆಲವೊಮ್ಮೆ ಸಂತಾಪಗಳನ್ನು ಹಂಚಿಕೊಳ್ಳುವ ಮನಸ್ಸಿರುವವರು ಅತಿ ಬೇಗನೆ ಸ್ನೇಹಿತರನ್ನು ಪಡೆದುಕೊಳ್ಳುತ್ತಾರೆ. ಕೆಲವರಿದ್ದಾರೆ ತಮ್ಮ ದುಃಖ, ತಮ್ಮ ಸಂತಾಪಗಳನ್ನೂ ಇತರರ ಬಗೆಗಿನ ಆಗದ ಹೋಗದ ವಿಷಯಗಳನ್ನೂ ಹೇಳಿಕೊಳ್ಳಲಿಕ್ಕೋಸ್ಕರವಾಗಿ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಾರೆ. ಅಂಥಹವರಿಂದ ಇದ್ದ ಸ್ನೇಹಿತರೂ ದೂರವಾಗಿ ಅವರು ಒಂಟಿಯಾಗುವುದು ಜಾಸ್ತಿ. ಸ್ನೇಹದ ಪರಿಚಯ ಮತ್ತು ನಾವು ಅವರನ್ನು ಅರಿತುಕೊಳ್ಳವುದು ಸ್ನೇಹಿತರ ಅಗಲುವಿಕೆಯ ಸಂದರ್ಭ ಬಂದಾಗ ಮಾತ್ರ. ಉದಾಹರಣೆಗೆ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾಥರ್ಿ/ವಿದ್ಯಾಥರ್ಿನಿಯರು ವರ್ಷದ ಕೊನೆಗೆ ಏನೋ ಕಳೆದುಕೊಂಡವರಂತೆ ಇರುವುದು, ತಮ್ಮ ಗೆಳೆಯ/ಗೆಳತಿಯರ ಹಸ್ತಾಕ್ಷರ ಭರಿತ ಪುಸ್ತಕವನ್ನು ನೆನಪಾಗಿಟ್ಟುಕೊಳ್ಳುವುದು, ಯಾವತ್ತೂ ಅವರೊಟ್ಟಿಗಿದ್ದಾಗ ಬಾರದ ಅಳು ಪರೀಕ್ಷೆಯ ಕೊನೆಗೆ ಧುಮ್ಮಿಕ್ಕುವುದು ಇವೆಲ್ಲಾ ಆದರೆ, ಇನ್ನೊಂದೆಡೆ ಹೇಳುವುದಾದರೆ ಆಕಸ್ಮಾತ್ತಾಗಿ ಸಂಭವಿಸಿದ ಗೆಳೆಯರ ಸಾವು ಕೂಡ ಭರಿಸಲಾರದ ನಷ್ಟವಾಗಿ ಬಿಡುತ್ತದೆ. ಗೆಳೆತನ ವೆಂದರೆ ನಾವು ನಮ್ಮೊಳಗೆ ಅವರಿಗಾಗಿಟ್ಟಿರುವ ಅಚ್ಚಳಿಯದ ಸಾವಿರದ ಪ್ರೀತಿ. ಸ್ನೇಹ, ಇದು ಉಕ್ಕಿ ಹರಿಯಬಹುದೇ ಹೊರತು ಎಂದು ಬರಡಾಗದು. ಅವರು ನಮ್ಮಿಂದ ದೂರವಾದಗ ಅವರ ಇರುವಿಕೆ ಮರೆತು ಹೋಗಬಹುದು. ಆದರೆ ಹಿಂದಿನ ಆ ಸುಂದರ ನೆನಪುಗಳು ಮತ್ತು ಅವರ ಮುಖ ಕಾಣಸಿಕ್ಕಾಗ ನಮ್ಮಲ್ಲಾಗುವ ಆನಂದ ಎಂದೆಂದಿಗೂ ಮರೆಯಲಾಗದು. ಗೆಳೆಯರು ನಮ್ಮೊಟ್ಟಿಗಿದ್ದಾಗಿನ ಸಂತೋಷ ಲವಲವಿಕೆ, ಮೋಜು, ಆನಂದ,ಆ ಜೀವಂತಿಕೆ ಅವರಿಲ್ಲದಾಗ ಇರುವುದಿಲ್ಲ ಹೊರ ದೇಶಕ್ಕೂ ಎಲ್ಲೋ ಹೋಗಿ ನೆಲೆಸಿ ತಮ್ಮ ದೇಶಕ್ಕೂ, ಊರಿಗೂ ವಾಪಾಸದಾಗ ಗೆಳೆಯರನ್ನು ನೋಡಿದ ಕೂಡಲೇ ಆ ಉತ್ಸಾಹ ಆನಂದ ಎಲ್ಲಾ ಕಾಣಸಿಗುತ್ತದೆ. (ಸ್ನೇಹಿತ) ಗೆಳೆಯರೊಟ್ಟಿಗೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟ. ಆಗ ತಿಳಿಸಿದಂತೆಯೇ ಅದೊಂದು ಅದ್ಭುತ ಶಕ್ತಿ, ಅದೊಂದು ಶ್ರೇಷ್ಠ ಭಾಂದವ್ಯ. ಗೆಳೆತನವೆಂಬುದು ಇಲ್ಲದಿದ್ದರೆ ಈ ಭೂಮಿಯೊಳಗಿನ ಜೀವರಾಶಿಗಳು ಒಂದಕ್ಕೊಂದು ಕಚ್ಚಾಡಿ, ಜಗಳವಾಡಿ ಸಾಯುತ್ತಿದ್ದವು, ಜೀವರಾಶಿಯ ಬೆಳವಣಿಗೆ ಸಾಮಾನ್ಯ ಮಾತುಕತೆಗಳೂ ಇರುತ್ತಿರಲ್ಲಿಲ್ಲ. ನಮ್ಮ ಪೂರ್ವಜರ ಸ್ನೇಹ ಸೌಹರ್ದತೆಯು ಇಂದಿಗೂ ನಾವು ಕೂಡಿಬಾಳಿದರೆ ಸ್ವರ್ಗ ಸುಖ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿ ಅವರ ಸ್ನೇಹದ ಬಲವನ್ನು ತಿಳಿದುಕೊಳ್ಳುವಂತಾಗಿದೆ. ಈಗ ರಾಜಕೀಯದಲ್ಲೇ ಇರಲಿ, ವ್ಯಾಪರ ವ್ಯವಹಾರವಾಗಿರಲಿ ಯಾವ ದೇಶವೂ ಬೆಳೆಯುತ್ತಿರಲಿಲ್ಲ.

- ಸೌಮ್ಯ

ಕವನ


ಸಾಧನೆ

ಸಾಧನೆಯ ಶಿಖರಕ್ಕೆ ಹಲವಾರು ಮೆಟ್ಟಿಲು
ಜಾಗ್ರತೆಯ ಹೆಜ್ಜೆಗೆ ನೀನಾಗು ಶಕ್ತಿ
ಪ್ರತಿಯೊಬ್ಬರ ಅಂತರಾಳದಲ್ಲಿ
ಮಲಗಿದೆ ಆತ್ಮವಿಶ್ವಾಸ
ಬಡಿದೆಬ್ಬಿಸು ಸರಿಯಾದ ಸಮಯದಲ್ಲಿ
ಸೋಲಿಲ್ಲದವರ್ಯಾರಿಲ್ಲ ಜಗದಲ್ಲಿ
ಸೋಲೆಗೆಲುವಾಗುವುದು ಜೀವನದಲ್ಲಿ
ಸೋಲಿಗೆ ಸಾವಲ್ಲ ಪರಿಹಾರವಿಲ್ಲ
ಪುಟ್ಟ ಹೆಜ್ಜೆಯ ನೀಡುವಾಗ ನೀ
ಬಿದ್ದೆದ್ದೆ ಎಷ್ಟು ಬಾರಿ
ಹಾಗೆಂದು ನಡೆಯದೆ ಕುಳಿತೆಯಾ ನೀ
ಹಗಲಿರುಳು ಬಂದು ಹೋಗುವುದು ಹೇಗೋ
ಜೀವನದ ಸುಖ ದುಃಖವು ಹಾಗೇ
ಅದನರಿಯಾ ಬೇಕು ಓ ಮನವೇ
ಜಯದ ಹಾದಿಯಲ್ಲಿ ನೂರಾರು ಅಡೆತಡೆ
ಅಡೆತಡೆಯ ಭೇದಿಸಿ ನಡೆ ನೀ ಮುಂದೆ
ಸಾಧನೆಯ ಶಿಖರವೇರು ಹರುಷದಲಿ
ಮುಂದಿಟ್ಟ ಹೆಜ್ಜೆಯ ಹಿಮ್ಮೆಟ್ಟ ಬೇಡ
ನಿನ್ನ ಪರಿಶ್ರಮಕೆ ದೊರಕುವುದು ಫಲ
ನಿನ್ನ ಬಾಳಾಗುವುದು ಬಂಗಾರ

- ವಾಸು (ದ್ವಿತೀಯ ಬಿ.ಎ)


ಜೀವನ

ಮುಂ ಜಾನೆಯ ಇಬ್ಬನಿಯಂತೆ
ಹಕ್ಕಿಯ ಇಂಪಾದ ಹಾಡಿನಂತೆ
ಜೇನಿನ ಸವಿಯಂತೆ
ಹೊಳೆಯುವ ನಕ್ಷತ್ರದಂತೆ
ಮುದ್ದು ಕಂದನ ನಗುವಿನಂತೆ
ಸೊಗಸಾಗಿರಲಿ ಈ ಜೀವನ ಪಯಣ
ಐಕ್ಯತೆ
ಬಾನಿನಿಂದ ಇಳಿದ ವರ್ಷಧಾರೆ
ಚಿಗುರು ತಂದಿತು ಭೂಮಿಗೆ
ನೆಲದ ತಂಪು ಗಂಥಗಾಳಿ
ಮಣ್ಣಿನ ಕಂಪ ಹೊಮ್ಮಿಸಿತು
ಕಾನನದಿ ಅರಳಿದ ಹೂವು
ಹೊಸ ಸುಗಂಧ ನೀಡಿತು ಮನಕೆ
ಭಿನ್ನ ಭಿನ್ನ ಹೃದಯದ ಮಂತ್ರ
ಏಕತೆಯನ್ನು ಸಾರಿತು ಬಾಳಿಗೆ
- ಶರಣ್ಯ
(ದ್ವಿತೀಯ ಬಿ.ಎ)


ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ


`ಜಲ' ಈ ಎರಡಕ್ಷರದ ಪದ ಕೇವಲ ನೀರಲ್ಲ! ಅದು ಜೀವ ಕೊಡುವ ಶಕ್ತಿ. ಆ ಕಾರಣಕ್ಕೇ ಅದಕ್ಕೆ ಜೀವಜಲ ಎಂಬ ಹೆಸರು. ಈ ಜಲವನ್ನು ಆಯಾ ಪ್ರದೇಶ, ಭಾಷೆಯಲ್ಲಿ ವಿಭಿನ್ನವಾಗಿ ಕರೆಯಲಾಗಿದೆ. ಕನ್ನಡದಲ್ಲಿ ನೀರು, ಕೊಂಕಣಿಯಲ್ಲಿ ಉದಕ್, ತುಳುವಿನಲ್ಲಿ ನೀರ್, ಆಂಗ್ಲಭಾಷೆಯಲ್ಲಿ ವಾಟರ್, ಹಿಂದಿಯಲ್ಲಿ ಪಾನಿ, ಮಲೆಯಾಳಂನಲ್ಲಿ ವೆಳ್ಳಂ ಹೀಗೆ ಕರೆಯಲಾಗುತ್ತದೆ. ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯುವುದು ಪ್ರಸಕ್ತ ದಿನಗಳಲ್ಲಿ ಅನಿವಾರ್ಯ. ತನ್ಮೂಲಕ ಜಲ ಸಂರಕ್ಷಣೆಯನ್ನು ಪ್ರತಿಯೊಬ್ಬನೂ ಕೈಗೊಳ್ಳಬೇಕಾದ ಸ್ಥಿತಿಯೂ ಇಂದೊದಗಿ ಬಂದಿದೆ.
ದೈನಂದಿನ ಜನಜೀವನದ ಕಾರ್ಯಚಟುವಟಿಕೆಗಳಲ್ಲಿ ನೀರಗೆ ಪ್ರಮುಖ ಸ್ಥಾನವಿದೆ. ನೀರಿಲ್ಲದೆ ಪ್ರಾಣಿ, ಪಕ್ಷಿ ಜೀವಸಂಕುಲಗಳು ಬದುಕಲು ಸಾಧ್ಯವೇ ಇಲ್ಲ. ಆದರೆ ಇಂದು ಈ ಪ್ರಾಮುಖ್ಯವಾದ ನೀರಿಗೆ ತೊಂದರೆಯೊದಗುವು ಅಪಾಯಕಾರಿ ಸ್ಥಿತಿ ಬಂದೊದಗಿದೆ.
ಮಾನವನ ಅತಿಬುದ್ದಿವಂತಿಕೆಯಿಂದ ಪರಿಸರದಲ್ಲಿ ಅಸಮತೋಲನವುಂಟಾಗಿದೆ. ಇದು ನೇರವಾಗಿ ನೀರಿನ ಮೇಲೂ ಪರಿಣಾಮ ಬೀರತೊಡಗಿದೆ. ಇಂದು ನಿರಂತರ ಪರಿಸರ ಮಾಲಿನ್ಯ, ಪರಿಸರ ಹಾನಿ ನಡೆಯುತ್ತಿದೆ. ಬೃಹದಾಕಾರದ ಕಟ್ಟಡಗಳ ನಿಮರ್ಾಣ, ಉದ್ಯಮಗಳ ಸ್ಥಾಪನೆಗಾಗಿ ಹಸಿರ ಕಾಡಿಗೆ ಕೊಡಲಿಯೇಟು ಬೀಳಲಾರಂಭಿಸಿದೆ. ಇದರಿಂದಾಗಿ ಸರಿಯಾದ ಸಂದರ್ಭದಲ್ಲಿ ಮಳೆಯಿಲ್ಲ, ಮಳೆಯಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಆಹಾರ ಧಾನ್ಯಗಳಿಲ್ಲ ಎಂಬಂತ ಸ್ಥಿತಿ ಬಂದೊದಗಿದೆ. ಕಾಲ ಕಾಲಕ್ಕೆ ಮಳೆಯಾಗದೆ ಕೃಷಿಕರು ತೊಂದರೆಯನ್ನನುಭವಿಸುವಂತಾಗಿದೆ.
ಕಟ್ಟಡ ಕಾಮಗಾರಿ, ಇತರೆ ಕಾಮಗಾರಿಗಾಗಿ ನೀರಿನ ಅತಿಯಾದ ಬಳಕೆಯಿಂದಾಗುತ್ತಿದೆ. ನೀರನ್ನು ಹಿತ ಮಿತವಾಗಿ ಬಳಸಬೇಕು. ಜಲ ಮಾಲಿನ್ಯವನ್ನು ತಡೆಗಟ್ಟಬೇಕು. ಭೂಮಿಯಲ್ಲಿ ನೀರಿಂಗುವಂತೆ ಮಾಡಿ ಜಲ ಸಂರಕ್ಷಣೆಗೆ ನಾವು ಸಿದ್ಧರಾಗಬೇಕು. ಅಂತರ್ಜಲದ ಮಟ್ಟ ಏರಿಸುವಂತೆ ನಾವು ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಕಾಯರ್ೋನ್ಮುಖರಾಗಬೇಕಾಗಿದೆ.
- ಬಿನ್ಸಿ ವರ್ಗೀಸ್.


ಚಿಂತನೆ


ಭಾರತದ ಆರ್ಥಿಕ ಸ್ಥಿತಿ - ಗತಿ

ದೇ ಶದ ಆರ್ಥಿಕ ಸ್ಥಿತಿ ಬಹಳ ಚಿಂತಾಜನಕ. ಕಾರಣ ಹಣದುಬ್ಬರ. ಹಣದುಬ್ಬರದಿಂದಾಗಿ ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಇದರಿಂದ ಬಡಜನರು ಮತ್ತು ಮಧ್ಯಮ ವರ್ಗದವರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಣದುಬ್ಬರದ ಪ್ರಸ್ತುತ ಸ್ಥಿತಿ ಶೇ.11.85ರಷ್ಟು ಏರಿಕೆ ಕಂಡಿದೆ. ಇದು ಕಳೆದ 13ವರ್ಷಗಳಲ್ಲಿಯೇ ಅತೀ ಹೆಚ್ಚಿನ ಏರಿಕೆಯಾದಂತಾಗಿದೆ.
ಚಿಲ್ಲರೆ ಹಾಗೂ ಸಗಟು ಮಾರಾಟಗಾರರು ಬೆಲೆ ಏರಿಕೆಯ ಎಲ್ಲಾ ಭಾರವನ್ನು ಜನರ ಮೇಲೆ ವಗರ್ಾಯಿಸುತ್ತಿದ್ದಾರೆ. ನಮ್ಮ ಹಣಕ್ಕೆ ಸಿಗುವ ವಸ್ತುಗಳ ಪ್ರಮಾಣ ತನ್ಮೂಲಕ ಕಡಿಮೆಯಾಗುತ್ತಿದೆ. ಬ್ಯಾಂಕ್ ಠೇವಣಿ, ಷೇರು, ಮೊದಲಾದವುಗಳ ಲಾಭಕ್ಕೆ ಇದರಿಂದಾಗಿ ಹೊಡೆತ ಬೀಳುತ್ತಿದೆ. ಆಥರ್ಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಹೊಸ ಸಾಲ ಸುಲಭದಲ್ಲಿ ದೊರೆಯದಾಗಿದೆ. ಉಳಿತಾಯದ ಠೇವಣಿಗೆಗೆ ಸೂಕ್ತ ಬೆಲೆಯಿಲ್ಲದಾಗಿದೆ.
ಸಕರ್ಾರಿ ಅನುತ್ಪಾದಕರ ಖಚರ್ುಗಳ ಬೇಡಿಕೆ ಸೃಷ್ಠಿಸಿದ ಪರಿಣಾಮ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಬಹುತೇಕ ಶ್ರೀಮಂತ ರಾಷ್ಟ್ರಗಳು ಹಣದುಬ್ಬರದ ಪ್ರಮಾಣವನ್ನು ಗ್ರಾಹಕರ ದರ ಸೂಚ್ಯಂಕದ ಉಪಯೋಗದ ಮೇಲೆ ಲೆಕ್ಕ ಹಾಕುತ್ತಿದ್ದರೆ, ದೇಶದಲ್ಲಿ ಸಗಟು ಸೂಚ್ಯಂಕ ದರವನ್ನು ಉಪಯೋಗಿಸಿ ಹಣದುಬ್ಬರದ ಲೆಕ್ಕ ಹಾಕಲಾಗುತ್ತಿದೆ.
ಸಗಟು ಸೂಚ್ಯಂಕ ದರವೆಂದರೆ ಸಗಟು ಮಾರುಕಟ್ಟೆಯಲ್ಲಿ ಸರಕುಗಳ ಸರಾಸರಿ ಬೆಲೆ ಹಾಗೂ ಮಾರಾಟದ ಪ್ರಮಾಣವನ್ನು ಲೆಕ್ಕ ಹಾಕಲು ಬಳಸುವ ವಿಧಾನವಾಗಿದೆ. ಭಾರತದಲ್ಲಿ ಹಣದುಬ್ಬರ 1995ರ ನಂತರ ಶೇ.8ರಷ್ಟಿತ್ತು. 1997ರಲ್ಲಿ ಶೇ.4.6ಕ್ಕೆ ಇಳಿಕೆ ಕಂಡಿತು. 2000ನೇ ಇಸವಿಯಲ್ಲಿ ಅತೀ ಕಡಿಮೆ 3.3 ಶೇಕ್ಕೆ ಇದು ಇಳಿಯಿತು. 2005ರ ನಂತರ ಏರಿಕೆಯಾಗುತ್ತಲೇ ಸಾಗಿದ ಹಣದುಬ್ಬರವು ಪ್ರಸಕ್ತ ಸಾಲಿನಲ್ಲಿ 11.85ಶೇ ಏರಿಕೆ ಕಂಡಿತು.
- ಈಶ ಪ್ರಸನ್ನ.

ಮಹಿಳೆ...




ಸ್ತ್ರೀ ಮತ್ತು ಉದ್ಯೋಗ

`ಉದ್ಯೋಗಂ ಪುರಷ ಲಕ್ಷಣಂ' ಎಂಬುದು ಸಾಮಾನ್ಯ. ಯಾವುದೇ ಉದ್ಯೋಗವಾದರೂ ಅದು ಪುರುಷರಿಗಷ್ಟೇ ಸೀಮಿತ ಎಂಬಂತ ಮಾತು ಕೇಳಿಬರುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಮಾತು ಸುಳ್ಳಾಗಿದೆ. `ಉದ್ಯೋಗಂ ಸ್ತ್ರೀ ಲಕ್ಷಣಂ' ಎಂಬಂತಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಬೇರೆಕಡೆಗಳಿಗೆ ಹೋಗಿ ಉದ್ಯೋಗ ಮಾಡುವುದನ್ನು ನಮ್ಮ ಸಮಾಜ ತಾತ್ಸಾರ ಭಾವನೆಯಿಂದ ಕಾಣುತ್ತಿತ್ತು. ಹಿಂದೆ ಸ್ತ್ರೀ ಕೇವಲ ಅಡುಗೆ ಮನೆಗಷ್ಟೇ ಸೀಮಿತ ಎಂಬತಿದ್ದಳು. ಗಂಡನ ಸೇವೆಮಾಡುತ್ತಾ ಮನೆ, ಮಕ್ಕಳು , ಸಂಸಾರವನ್ನು ನೋಡುವುದು ಆಕೆಯ ಕೆಲಸಎಂಬಂತಿತ್ತು. ಹೀಗಾಗಿ ಸ್ತ್ರೀ ಉದ್ಯೋಗ ಮಾಡುವುದು ಅವಲಕ್ಷಣವೆನಿಸುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸ್ತ್ರೀ ಜೀನವದ ಎಲ್ಲಾ ರಂಗಗಳ ಉದ್ಯೋಗದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾಳೆ.
ಸ್ತ್ರೀ ಸ್ವಾವಲಂಬಿಯಾಗಿದ್ದಾಳೆ. ಡ್ರೈವರ್ ಸೀಟಿನಲ್ಲಿ ಕುಳಿತು ಅಟೋ ಓಡಿಸುತ್ತಾಳೆ... ಪುರುಷರಂತೆ ಬಸ್ಸುಗಳಲ್ಲಿ ಟಿಕೇಟ್ ನೀಡುತ್ತಾಳೆ... ಇಷ್ಟೇ ಯಾಕೆ ದಕ್ಷ ಪೊಲೀಸ್ ಅಧಿಕಾರಿಯಾಗಿಯೂ ಕಾಣಿಸಿಕೊಳ್ಳುತ್ತಾಳೆ... ರಾಷ್ಟ್ರಪತಿಯಂತಹ, ಪ್ರಧಾನಿಯಂತಹ ಹುದ್ದೆಯನ್ನೂ ಸಮರ್ಥಕವಾಗಿ ನಿರ್ವಹಿಸಿದ್ದಾಳೆ.
ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಅನಿವಾರ್ಯ. ಶಿಕ್ಷಣ ಸಂಸ್ಥೆಗಳಲ್ಲಿ, ರಾಜಕೀಯ ರಂಗದಲ್ಲಿ, ಬಾಹ್ಯಾಕಾಶದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ, ಗೃಹ ಕೈಗಾರಿಕೆಯಲ್ಲಿ ಹೀಗೆ ಪುರುಷನಿಗೆ ಸಮಾನಾಗಿ ದುಡಿಯುತ್ತಿದ್ದಾಳೆ. ಇದರಿಂದಾಗಿ ಸ್ತ್ರೀ ಶೋಷಣೆ ಒಂದಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.
ಕಾವ್ಯಶ್ರೀ
ಹಲೋ...ಕೇಳಿಸ್ತಿದ್ಯಾ...


ಹೌದು... ಈ ದೂರವಾಣಿ ಅಷ್ಟೊಂದು ಫೇಮಸ್... ದೂರವಾಣಿ ಎಂಬುದು ಒಂದು ಶ್ರಾವ್ಯ ಮಾಧ್ಯಮ. ಇದು ಕ್ರಿಯಾತ್ಮಕ ಸಂವಹನದ ಒಂದು ಮಾಧ್ಯಮ. ಇದನ್ನು ವಿದೇಶಿ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಾಂಬೆಲ್ ಸಂಶೋಧಿಸಿದನು. ಇದರ ಮೂಲಕ ಒಬ್ಬ ವ್ಯಕ್ತಿ ಇನ್ನೊಬ್ಬನಲ್ಲಿ ತರಂಗಾಂತರ ಸಂವಹನದ ಮೂಲಕ ಸಂಪಕರ್ಿಸಲು ಸಾಧ್ಯ. ಇತ್ತೀಚೆನ ದಿನಗಳಲ್ಲಿ ಈ ಮಾಧ್ಯಮದ ಒಂದು ಅನಿವಾರ್ಯವೆಂಬಂತಾಗಿದೆ. ಅಷ್ಟರ ಮಟ್ಟಿಗೆ ದೂರವಾಣಿ ಫೇಮಸ್!
ಅಗತ್ಯ ವಿಚಾರಗಳನ್ನು ತಿಳಿಸಲು, ಸುದ್ದಿ, ಮಾಹಿತಿಗಳನ್ನು, ವಾತರ್ೆಗಳನ್ನು ತಿಳಿಸಲು ಈ ದೂರವಾಣಿ ಅವಶ್ಯಕವೆಂಬಂತಾಗಿದೆ.
ಇಂದು ದೂರವಾಣಿ ಇಲ್ಲದ ಮನೆಯಿಲ್ಲ. ಕಚೇರಿ, ಮಾಧ್ಯಮ ಸಂಸ್ಥೆ, ಸರಕಾರಿ ಸಂಸ್ಥೆ, ಶಾಲೆ, ಕಾಲೇಜು, ಗೂಡಂಗಡಿ ಹೀಗೆ ಎಲ್ಲೆಂದರೆಲ್ಲಿ ದೂರವಾಣಿಗಳು ಬೇಕೇ ಬೇಕು. ದೂರವಾಣಿಗಳನ್ನಿರಿಸಿ ಉದ್ಯಮವನ್ನೇ ಮಾಡುತ್ತಾರೆ. ನಾಲ್ಕಾರು ಫೋನ್ಗಳನ್ನು ಅಳವಡಿಸಿ `ದೂರವಾಣಿ ಬೂತ್' ನಿಮರ್ಿಸಿ ಜೀವನ ಸಾಗಿಸುವ ಮಂದಿ ಅದೆಷ್ಟೋ...
ಈಗಿನ ಕಾಲದಲ್ಲಿ ದೂರವಾಣಿಯ ಉಪಕರಣದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಈ ನಿಟ್ಟಿನಲ್ಲೂ ಸಾಕಷ್ಟು ಸಂಶೋಧನೆಗಳು ನಡೆದಿವೆ. ಹಿಂದಿನ ಕಾಲದ ದೂರವಾಣಿಗಳಿಗಿಂತ ಇಂದಿನ ದೂರವಾಣಿಗಳು ವೈವಿಧ್ಯಮಯವಾಗಿ ಕಂಡುಬರುತ್ತವೆ. ಅಷ್ಟೇ ಅಲ್ಲದೆ ಮೊಬೈಲ್ ದೂರವಾಣಿಯ ಆವಿಷ್ಕಾರವೂ ಇಂದಾಗಿದೆ.
ರೋಶನ್ ಬಿ. ಸುರತ್ಕಲ್.

Saturday, July 12, 2008

ನುಡಿಚಿತ್ರ

ಇವರ

ಭವಿಷ್ಯ..?

ಹೊ ಟ್ಟೆತುಂಬಾ ಕೂಳಿಲ್ಲ. ತಲೆ ಮೇಲೆ ಸೂರಿಲ್ಲ. ಹಗಲು ಜನ ನಡೆದಾಡುವ ಪ್ಲಾಟ್ ಫಾರಂ, ಬಸ್ ಸ್ಟ್ಯಾಂಡ್ಗಳೇ ರಾತ್ರಿ ಇವರ ಬೆಡ್ರೂಂಗಳು!. ಕೈಗಳಲ್ಲಿ ಪಾತ್ರೆಗಳು, ತಲೆಯ ಮೇಲೆ ಬಟ್ಟೆಯ ಗಂಟೊಂದನ್ನು ಹೊತ್ತುಕೊಂಡು ದಿನಕ್ಕೊಂದು ಕಡೆ ಅಲೆದಾಡುವ ಈ ಅಲೆಮಾರಿ ಕೂಲಿಕಾರ್ಮಿಕರಿಗೆ ಭವಿಷ್ಯ ಒಂದು ಪ್ರಶ್ನಾರ್ಥಕ ಚಿಹ್ನೆ...!
ಕ್ಷಿಪ್ರಗತಿಯಲ್ಲಿ ಪ್ರಗತಿಯತ್ತ ದಾಪುಗಾಲಿಡುತ್ತಿರುವ ಮಹಾನಗರ ಮಂಗಳೂರು. ಇಲ್ಲಿ ಒಂದೆಡೆ ಮಲ್ಟಿಪ್ಲೆಕ್ಸ್, ಪಬ್ಗಳಲ್ಲಿ ಕಾಲ ಕಳೆಯುವ ಜನರಿದ್ದರೆ, ಮತ್ತೊಂದೆಡೆ ಒಪ್ಪೊತ್ತಿನ ಕೂಳಿಗಾಗಿ ಪರದಾಡುವ ಕೂಲಿ ಕೂಲಿಕಾರ್ಮಿಕರಿದ್ದಾರೆ. ಪುರಭವನದ ಇಕ್ಕೆಲಗಳು, ಹಂಪನಕಟ್ಟೆ, ಮಾಕರ್ೆಟ್, ಕಂಕನಾಡಿ ರೈಲ್ವೇ ಸ್ಟೇಶನ್, ಕೆ.ಎಸ್.ಆರ್.ಟಿ.ಸಿ ಬಸ್ಸ್ಟ್ಯಾಂಡ್ ಹೀಗೆ ನಗರದ ಪ್ರಮುಖ ಭಾಗಗಳಲ್ಲಿ ಗುಂಪಾಗಿ ಜೀವಿಸುವ ಕೂಲಿ ಕಾಮರ್ಿಕರದ್ದು ಅಲೆಮಾರಿ ಜೀವನ.
ನವಜಾತ ಶಿಶುವಿನಿಂದ ಹಿಡಿದು, ವೃದ್ಧರ ವರೆಗೆ ಎಲ್ಲಾ ವಯಸ್ಸಿನವರನ್ನು ಒಳಗೊಂಡಿರುವ ಅಲೆಮಾರಿ ಕೂಲಿಕಾರ್ಮಿಕರ ಗುಂಪುಗಳು ಮೂಲತಃ ಇಲ್ಲಿನವಲ್ಲ. ಬಡತನದಿಂದ ಬಸವಳಿದ ಇವರು ಜೀವನ ನಿರ್ವಹಣೆಗಾಗಿ ವಿಜಾಪುರ, ಗದಗ, ಗುಲ್ಬರ್ಗ,ಧಾರಾವಾಡಗಳಂತಹ ದೂರದ ಊರುಗಳಿಂದ ಮಂಗಳೂರನ್ನು ಸೇರಿದ್ದಾರೆ. ಹಣದ ಅಭಾವ, ನೀರಿನ ಕೊರತೆಗಳಿಂದಾಗಿ ಊರಲ್ಲಿದ್ದ ಹೊಲಗಳಲ್ಲಿ ಬೆಳೆ ಬೆಳೆಯಲಾಗದೇ ಮನೆ ಮಠಗಳನ್ನು ತ್ಯಜಿಸಿ ಮಹಾನಗರಕ್ಕಾಗಮಿಸಿದ್ದಾರೆ.
ನಗರವನ್ನು ಸೇರಿದ ಕೂಲಿಕಾರ್ಮಿಕರು ಕಟ್ಟಡ ಕಾಮಗಾರಿ, ಗಾರೆ ಕೆಲಸ, ಜಲ್ಲಿ ಹೊರುವುದು... ಮುಂತಾದವುಗಳನ್ನು ನಿರ್ವಹಿಸಿ ಹಣ ಸಂಪಾದಿಸಿದರೆ, ಅವರ ಮಕ್ಕಳು ಬೀದಿ ಬದಿಗಲ್ಲಿರುವ ಬಸ್ಸ್ಟ್ಯಾಂಡ್ಗಳಲ್ಲಿ ಹೊಟ್ಟೆಗೆ ಹಿಟ್ಟಿಲ್ಲದ ಅನಾಥರಂತೆ ನಟಿಸುತ್ತಾ ದಾರಿಹೋಕರನ್ನು ಕಾಡಿ ಬೇಡಿ ಭಿಕ್ಷೆ ಗಿಟ್ಟಿಸಿ ಅಷ್ಟಿಷ್ಟು ಸಂಪಾದಿಸುತ್ತಾರೆ.
ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿರುವ ಈ ಮಕ್ಕಳಿಗೆ ಭಿಕ್ಷೆ ಬೇಡುವ ಕಲೆ ಬಾಲ್ಯದಿಂದಲೇ ಕರಗತ.
ಕಟ್ಟಡ ಕಾಮಗಾರಿ , ಗಾರೆ ಕೆಲಸಗಳಲ್ಲಿ ದಿನವೊಂದಕ್ಕೆ 100ರಿಂದ 200ರು ಸಂಪಾದಿಸುವ ಕೂಲಿಗಳು ಅಷ್ಟರಲ್ಲೇ ತಮ್ಮ ಸಂಸಾರದ ಖರ್ಚು ಭರಿಸಬೇಕು. ಕೈಯಲ್ಲಿ ಕೆಲಸವಿಲ್ಲವೆಂದರೆ ಹೊಟ್ಟೆಯೂ ಬರಿದು. ಇಷ್ಟು ಕಡಿಮೆ ಸಂಬಳದಲ್ಲಿ ಸಂಸಾರದ ಖರ್ಚನ್ನು ಹೇಗೆ ತೂಗಿಸುತ್ತೀರಿ...? ಎಂದು ಪ್ರಶ್ನಿಸಿದರೆ `ಎಲ್ಲರೂ ದುಡಿಯೋಕ್ಕೆ ಹೋಗ್ತೀವಿ...ಎಲ್ಲಾರ್ದು ಸೇರಿದ್ರೆ ಸಾಕಾಗುತ್ತೆ. ನಮ್ ಮಕ್ಳನ್ನೂ ಕೆಲ್ಸಕ್ಕೆ ಕಳಿಸ್ತೀವಿ' ಎನ್ನುತ್ತಾರೆ ಧಾರಾವಾಡದ ಬಸಪ್ಪ.
ರಾತ್ರಿಯ ವೇಳೆ ರಸ್ತೆಯ ಇಕ್ಕೆಲಗಳು, ರೈಲ್ವೇ ಸ್ಟೇಷನ್, ಬಸ್ಟ್ಯಾಂಡ್ , ಕಾಮಗಾರಿ ಮುಗಿಯದ ಕಟ್ಟಡಗಳೇ ಇವರ (ಅರ)ಮನೆಗಳು. ಕಾಮಗಾರಿ ಮುಗಿಯುವ ತನಕ ಅಲ್ಲೇ ಇವರ ವಾಸ. ಇನ್ನು ಕೊರೆವ ಚಳಿ, ಮಳೆಯಲ್ಲೂ ರಸ್ತೆಬದಿಯಲ್ಲಿ ಕಾಲಕಳೆಯಬೇಕಾದಂತಹ ಸ್ಥಿತಿ ಇನ್ನು ಕೆಲವರದ್ದು.
ಬಸ್ಟ್ಯಾಂಡ್ ಸೂರಿನಡಿ ಆಶ್ರಯ ಪಡೆಯೋಣವೆಂದರೆ ರಾತ್ರಿ ಗಸ್ತು ತಿರುಗುವ ಪೋಲೀಸರ ಕಾಟ. ಬೀದಿ ಬದಿಗಳಲ್ಲಿ ಮಲಗಿದರೆ ನಡುರಾತ್ರಿಯವರೆಗೆ ಸಂಚರಿಸುವ ವಾಹನಗಳ ಉಪಟಳ. ಸುರಿವ ಮಳೆಯಿಂದ ರಾತ್ರಿಯಿಡೀ ರಕ್ಷಣೆ ಪಡೆಯಲು ಕೊನೆಗೂ ಇವರ ನೆರವಿಗೆ ಬರುವುದು ರಸ್ತೆ ಬದಿಗಳಲ್ಲಿರುವ ಎಡಿಬಿಯ ಬೃಹದಾಕಾರದ ಸಿಮೆಂಟ್ ಪೈಪುಗಳು. ಕೆಲವೊಮ್ಮೆ ಈ ಗೋಲಾಕಾರದ ಪೈಪುಗಳೇ ಜೋಪಡಿಗಳಾಗಿ ಮಾಪರ್ಾಡಾಗುವುದೂ ಇದೆ. ಆದರೆ ಸರಕಾರಿ ಅಧಿಕಾರಿಗಳ ಕಣ್ಣು ಬಿತ್ತೆಂದರೆ ಈ ಆಸರೆಗೂ ಕುತ್ತು.
ಮಂಗಳೂರಿನಲ್ಲಿ ಕಟ್ಟಡ ನಿಮರ್ಾಣಕ್ಕೆ ಕೂಲಿ ಕಾರ್ಮಿಕರ ಕೊರತೆ ಇದೆ. ಕಟ್ಟಡದ ಕಾಂಟ್ರಾಕ್ಟರ್ಗಳು ಬಿಜಾಪುರ, ಧಾರಾವಾಡಗಳಂತಹ ದೂರದ ಊರುಗಳಿಂದ ಕೂಲಿ ಕಾಮರ್ಿಕರನ್ನು ಇಲ್ಲಿಗೆ ಕರೆಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಕಾಂಟ್ರಾಕ್ಟರ್ಗಳನ್ನು ನಂಬಿ ನಗರಕ್ಕೆ ಬಂದ ಕೂಲಿಗಳ ಹೊಟ್ಟೆಗೆ ಮಾತ್ರ ತಣ್ಣೀರ ಬಟ್ಟೆಯೇ ಗತಿ.
ನಗರಕ್ಕೆ ಬಂದರೆ ಒಳ್ಳೆಯ ಸಂಬಳ ಸಿಗುವ ಕೆಲಸ ಕೊಡಿಸುವೆನೆಂಬ ಕಂಟ್ರಾಕ್ಟರ್ಗಳ ಸವಿ ಮಾತಿಗೆ ಮರುಳಾಗುವ ಹಳ್ಳಿಯ ಬಡಜನರು ತಮ್ಮ ಮನೆ ಮಠಗಳನ್ನು ತ್ಯಜಿಸಿ ಹಣದಾಸೆಗೆ ಕೂಲಿಗಳಾಗಿ ನಗರಕ್ಕೆ ಆಗಮಿಸುತ್ತಾರೆ. ಆದರೆ ಕಾಂಟ್ರಾಕ್ಟರ್ಗಳ ನಿಜಮುಖ ಬಯಲಾಗುವಷ್ಟರಲ್ಲಿ ಅವರು ನಿರ್ಗತಿಕರಾಗಿರುತ್ತಾರೆ.
ಒಂದೆಡೆ ಕೆಲಸ ಮಾಡಿಸಿ ಹಣ ಕೊಡದೆ ಸತಾಯಿಸುತ್ತಿರುವ ಕಾಂಟ್ರಾಕ್ಟರ್ಗಳಿದ್ದರೆ, ಮತ್ತೊಂದೆಡೆ ಆರು ತಿಂಗಳು ಕೆಲಸ ಕೊಡುತ್ತೇವೆಂದು ನಂಬಿಸಿ
ಹತ್ತೇ ದಿನಕ್ಕೆ ಕೈ ಕೊಡುವವರಿದ್ದಾರೆ.
ವಾರಕ್ಕೊಮ್ಮೆ ಕೈ ಸೇರುವ ಅಲ್ಪ ಸ್ವಲ್ಪ ಸಂಬಳದಲ್ಲೇ ಕೂಲಿಗಳು ದಿನ ದೂಡಬೇಕು. ಏಕೆ? ಏನು? ಎಂದು ಪ್ರಶ್ನಿಸಿದರೆ ಮರುದಿನವೇ ಗೇಟ್ಪಾಸ್.
ಅಪ್ಪಿ ತಪ್ಪಿ ಕಂಟ್ರಾಕ್ಟರ್ಗಳಿಂದ ಕೆಲಸ ಗಿಟ್ಟಿಸಿಕೊಂಡರೂ ಕೂಲಿಗಳಿಗೆ ಇತರ ಸಮಸ್ಯೆಗಳು ತಪ್ಪಿದ್ದಲ್ಲ. ವಾಸಕ್ಕೆಂದು ನೀಡುವ ಗುಡಿಸಲು ಕರಾಗೃಹಕ್ಕಿಂತಲೂ ಕಠಿಣ. ಕೋಳಿಗೂಡಿನಂತಿರುವ ಗುಡಿಸಲಲ್ಲಿ ಆರೇಳು ಮಂದಿ ವಾಸಿಸಬೇಕು. ಜೋರಾಗಿ ಒಂದು ಮಳೆ ಬಂದರೆ ಜೋಪಡಿ ನೆಲಸಮ.
ಸ್ನಾನ ಗೃಹ , ಶೌಚಾಲಯಗಳ ಮುಖವನ್ನಂತೂ ಇವರು ಜೀವಮಾನದಲ್ಲೇ ಕಂಡೇ ಇಲ್ಲ. ಆರೋಗ್ಯ ಹದಗೆಟ್ಟರೆ ಸರಕಾರಿ ಆಸ್ಪತ್ರೆಯಲ್ಲೂ ಇವರಿಗೆ ಜಾಗ ಇಲ್ಲ.
ಸಾಯಂಕಾಲ ಕೆಲಸ ಮುಗಿದ ಬಳಿಕ ಕಾಮಗಾರಿಗಾಗಿ ತಂದ ಸಿಮೆಂಟ್ ಮಿಶ್ರಿತ ಮಣ್ಣು ನೀರಿನಲ್ಲೇ ಕೂಲಿಗಳ ಅಭ್ಯಂಜನ. ಕೈಗೆ ಸಿಕ್ಕ ಪುಡಿಗಾಸಿನಲ್ಲಿ ನಾಳೆಗಳನ್ನು ಹೇಗೆ ಕಳೆಯುವುದು ಎಂದು ಕೆಲವರು ಯೋಚಿಸಿದರೆ, ಇನ್ನು ಕೆಲವು ಮದಿರಾ ಪ್ರಿಯರು ಕಂಠಮಟ್ಟ ಕುಡಿದು `ಸ್ವಪ್ನ ಲೋಕದಲ್ಲಿ ' ವಿಹರಿಸುತ್ತಿರುತ್ತಾರೆ. ರಾತ್ರಿ ಬೀದಿ ಬದಿಯ ನಿಯಾನ್ ದೀಪದಡಿ ಸ್ಟೌ, ಪಾತ್ರೆಗಳನ್ನಿಟ್ಟು ಗುಂಪಾಗಿ ಅಡುಗೆ ಮಾಡುವುದೆಂದರೆ ಇವರಿಗೆ ಎಲ್ಲಿಲ್ಲದ ಸಂಭ್ರಮ.
ಭವಿಷ್ಯದ ಅನಿಶ್ಚಿತತೆಯ ನಡುವೆಯೂ ನಾಳಿನ ಬಗ್ಗೆ ಚಿಂತಿಸದೆ, ಕಷ್ಟಗಳಿಗೆ ಎದೆಗುಂದದೇ ಜೀವನ ಸಾಗಿಸುವ ಕೂಲಿ ಕಾಮರ್ಿಕರ ಧೈರ್ಯ ಮೆಚ್ಚಬೇಕಾದದ್ದೇ. ಬಡತನ ನಿಮರ್ೂಲನೆ, ಸಂಪೂರ್ಣ ಸಾಕ್ಷರತೆ, ಉದ್ಯೋಗ ಖಾತರಿ ಯೋಜನೆ...ಹೀಗೆ ಒಂದಾದ ಮೇಲೊಂದು ಯೋಜನೆಗಳನ್ನು ಹಮ್ಮಿಕೊಂಡು, ಪ್ರಚಾರ ಗಿಟ್ಟಿಸುವ ಸರಕಾರ ಈ ಕೂಲಿ ಕಾಮರ್ಿಕರ ಕಡೆಗೂ ಸ್ವಲ್ಪ ಗಮನ ಹರಿಸಲಿ.

- ಅಕ್ಷತಾ ಸಿ.ಎಚ್.
ಚಿತ್ರ: ಪ್ರಸನ್ನ ಬಿ.ಪಿ