Monday, July 14, 2008

`ಹೊಂಗಿರಣ'

ಬ್ಲಾಗ್ ಮಂಡಲದಲ್ಲೊಂದು ಹೊಸ ತಾಣ

ಮಂಗಳೂರು, ಜು.15- ಬ್ಲಾಗ್ ಮಂಡಲಕ್ಕೊಂದು ಹೊಸ ತಾಣದ ಸೇರ್ಪಡೆಯಾಗಿದೆ. ಮಂಗಳೂರಿನ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆಯಾದ `ಹೊಂಗಿರಣ' ಇದೀಗ ಬ್ಲಾಗ್ ಮಂಡಲಕ್ಕೊಂದು ಸೇರ್ಪಡೆಯಾಗಿದೆ.

ಮಂಗಳೂರು ಆಕಾಶವಾಣಿಯ ಸಹಾಯಕ ಕೇಂದ್ರ ನಿರ್ದೇಶಕ ಶಿವಾನಂದ ಬೇಕಲ್ ಮಂಗಳವಾರ ಬ್ಲಾಗ್ ಅನಾವರಣಗೊಳಿಸಿ, ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿಯಾಗುತ್ತಿದ್ದು, ಇದೀಗ ಪತ್ರಿಕೋದ್ಯಮ ವಿಭಾಗದ, ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ರಾಜಮೋಹನ ರಾವ್ ಅಧ್ಯಕ್ಷತೆ ವಹಿಸಿದರು. ವಿಭಾಗದ ಉಪನ್ಯಾಸಕಿ ಅಕ್ಷತಾ ಸಿ.ಎಚ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

No comments: