Monday, July 14, 2008


ಚಿಂತನೆ


ಭಾರತದ ಆರ್ಥಿಕ ಸ್ಥಿತಿ - ಗತಿ

ದೇ ಶದ ಆರ್ಥಿಕ ಸ್ಥಿತಿ ಬಹಳ ಚಿಂತಾಜನಕ. ಕಾರಣ ಹಣದುಬ್ಬರ. ಹಣದುಬ್ಬರದಿಂದಾಗಿ ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಇದರಿಂದ ಬಡಜನರು ಮತ್ತು ಮಧ್ಯಮ ವರ್ಗದವರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಣದುಬ್ಬರದ ಪ್ರಸ್ತುತ ಸ್ಥಿತಿ ಶೇ.11.85ರಷ್ಟು ಏರಿಕೆ ಕಂಡಿದೆ. ಇದು ಕಳೆದ 13ವರ್ಷಗಳಲ್ಲಿಯೇ ಅತೀ ಹೆಚ್ಚಿನ ಏರಿಕೆಯಾದಂತಾಗಿದೆ.
ಚಿಲ್ಲರೆ ಹಾಗೂ ಸಗಟು ಮಾರಾಟಗಾರರು ಬೆಲೆ ಏರಿಕೆಯ ಎಲ್ಲಾ ಭಾರವನ್ನು ಜನರ ಮೇಲೆ ವಗರ್ಾಯಿಸುತ್ತಿದ್ದಾರೆ. ನಮ್ಮ ಹಣಕ್ಕೆ ಸಿಗುವ ವಸ್ತುಗಳ ಪ್ರಮಾಣ ತನ್ಮೂಲಕ ಕಡಿಮೆಯಾಗುತ್ತಿದೆ. ಬ್ಯಾಂಕ್ ಠೇವಣಿ, ಷೇರು, ಮೊದಲಾದವುಗಳ ಲಾಭಕ್ಕೆ ಇದರಿಂದಾಗಿ ಹೊಡೆತ ಬೀಳುತ್ತಿದೆ. ಆಥರ್ಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಹೊಸ ಸಾಲ ಸುಲಭದಲ್ಲಿ ದೊರೆಯದಾಗಿದೆ. ಉಳಿತಾಯದ ಠೇವಣಿಗೆಗೆ ಸೂಕ್ತ ಬೆಲೆಯಿಲ್ಲದಾಗಿದೆ.
ಸಕರ್ಾರಿ ಅನುತ್ಪಾದಕರ ಖಚರ್ುಗಳ ಬೇಡಿಕೆ ಸೃಷ್ಠಿಸಿದ ಪರಿಣಾಮ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಬಹುತೇಕ ಶ್ರೀಮಂತ ರಾಷ್ಟ್ರಗಳು ಹಣದುಬ್ಬರದ ಪ್ರಮಾಣವನ್ನು ಗ್ರಾಹಕರ ದರ ಸೂಚ್ಯಂಕದ ಉಪಯೋಗದ ಮೇಲೆ ಲೆಕ್ಕ ಹಾಕುತ್ತಿದ್ದರೆ, ದೇಶದಲ್ಲಿ ಸಗಟು ಸೂಚ್ಯಂಕ ದರವನ್ನು ಉಪಯೋಗಿಸಿ ಹಣದುಬ್ಬರದ ಲೆಕ್ಕ ಹಾಕಲಾಗುತ್ತಿದೆ.
ಸಗಟು ಸೂಚ್ಯಂಕ ದರವೆಂದರೆ ಸಗಟು ಮಾರುಕಟ್ಟೆಯಲ್ಲಿ ಸರಕುಗಳ ಸರಾಸರಿ ಬೆಲೆ ಹಾಗೂ ಮಾರಾಟದ ಪ್ರಮಾಣವನ್ನು ಲೆಕ್ಕ ಹಾಕಲು ಬಳಸುವ ವಿಧಾನವಾಗಿದೆ. ಭಾರತದಲ್ಲಿ ಹಣದುಬ್ಬರ 1995ರ ನಂತರ ಶೇ.8ರಷ್ಟಿತ್ತು. 1997ರಲ್ಲಿ ಶೇ.4.6ಕ್ಕೆ ಇಳಿಕೆ ಕಂಡಿತು. 2000ನೇ ಇಸವಿಯಲ್ಲಿ ಅತೀ ಕಡಿಮೆ 3.3 ಶೇಕ್ಕೆ ಇದು ಇಳಿಯಿತು. 2005ರ ನಂತರ ಏರಿಕೆಯಾಗುತ್ತಲೇ ಸಾಗಿದ ಹಣದುಬ್ಬರವು ಪ್ರಸಕ್ತ ಸಾಲಿನಲ್ಲಿ 11.85ಶೇ ಏರಿಕೆ ಕಂಡಿತು.
- ಈಶ ಪ್ರಸನ್ನ.

No comments: