Monday, July 14, 2008

`ಹೊಂಗಿರಣ'

ಬ್ಲಾಗ್ ಮಂಡಲದಲ್ಲೊಂದು ಹೊಸ ತಾಣ

ಮಂಗಳೂರು, ಜು.15- ಬ್ಲಾಗ್ ಮಂಡಲಕ್ಕೊಂದು ಹೊಸ ತಾಣದ ಸೇರ್ಪಡೆಯಾಗಿದೆ. ಮಂಗಳೂರಿನ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರತಿಭೆಗಳ ಅನಾವರಣಕ್ಕೊಂದು ವೇದಿಕೆಯಾದ `ಹೊಂಗಿರಣ' ಇದೀಗ ಬ್ಲಾಗ್ ಮಂಡಲಕ್ಕೊಂದು ಸೇರ್ಪಡೆಯಾಗಿದೆ.

ಮಂಗಳೂರು ಆಕಾಶವಾಣಿಯ ಸಹಾಯಕ ಕೇಂದ್ರ ನಿರ್ದೇಶಕ ಶಿವಾನಂದ ಬೇಕಲ್ ಮಂಗಳವಾರ ಬ್ಲಾಗ್ ಅನಾವರಣಗೊಳಿಸಿ, ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಕ್ರಾಂತಿಯಾಗುತ್ತಿದ್ದು, ಇದೀಗ ಪತ್ರಿಕೋದ್ಯಮ ವಿಭಾಗದ, ವಿದ್ಯಾರ್ಥಿಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ರಾಜಮೋಹನ ರಾವ್ ಅಧ್ಯಕ್ಷತೆ ವಹಿಸಿದರು. ವಿಭಾಗದ ಉಪನ್ಯಾಸಕಿ ಅಕ್ಷತಾ ಸಿ.ಎಚ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಂಪಾದಕೀಯ...

ನಾವು ನಡೆದು ಬಂದ ಹಾದಿ

ವಿದ್ಯಾರ್ಥಿ ಜೀವನ ಪ್ರತಿಭೆಗಳನ್ನು ಅನಾವರಣಗೊಳಿಸುವ ಪರ್ವಕಾಲ. ವಸಂತ ಮಾಸದಲ್ಲಿ ಮೊಗ್ಗೊಡೆದು ಬಿರಿಯುವ ಪುಷ್ಪಗಳಂತೆ ಈ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಅಂತರ್ಗತಗೊಂಡಿರುವ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ಜೀವನದ ಗುರಿಯನ್ನು ಸಾಧಿಸುವ ಅದಮ್ಯ ಹುಮಸ್ಸು, ಪ್ರಪಂಚವನ್ನೇ ಗೆಲ್ಲುವ ಆತ್ಮವಿಶ್ವಾಸ ಇವರಲ್ಲಿ ಪುಟಿದೇಳುತ್ತಿರುತ್ತವೆ. ವಿದ್ಯಾರ್ಥಿ ಜೀವನ ಸಾಧನಾ ಜೀವನ. ಈ ಹಂತದಲ್ಲಿ ಅವರು ಸಾಧಿಸಿದ ಸಾಧನೆಗಳು ಜೀವನದುದ್ದಕ್ಕೂ ಅವರಿಗೆ ದಾರಿದೀಪವಾಗುವುದು. ಹಾಗಾಗಿ ಈ ಕಾಲದಲ್ಲಿ ಇಂತಹ ಪ್ರತಿಭೆಗಳಿಗೆ ನೀರೆರೆದು ಪೋಷಿಸುವ ಆದ್ಯ ಕರ್ತವ್ಯ ವಿದ್ಯಾಸಂಸ್ಥೆಗಳದ್ದು.
ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹೊಸ ಹೊಸ ಹೆಜ್ಜೆಗಳನ್ನಿರಿಸುತ್ತಿದೆ. ಕೇವಲ ಮೂರು ವರುಷಗಳ ಹಿಂದಷ್ಟೇ ಪ್ರಾರಂಭಗೊಂಡ ನಮ್ಮ ವಿಭಾಗ ಇನ್ನೂ ಪುಟ್ಟ ಕೂಸು. ಸಾವಿರ ಕನಸುಗಳೊಂದಿಗೆ ಹುಟ್ಟಿಕೊಂಡ ಇದು ಭವಿಷ್ಯದಲ್ಲಿ ನನಸಾಗಿಸಬೇಕಾದ್ದು ಬೆಟ್ಟದಷ್ಟಿದೆ. ಶೈಕ್ಷಣಿಕ ಜಗತ್ತಿನ ಬದಲಾವಣೆಗಳಿಗನುಗುಣವಾಗಿ ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಚಿಂತನೆಯನ್ನು ಹಲವು ವರ್ಷಗಳ ಹಿಂದೆ ನಮ್ಮ ಕಾಲೇಜಿನ ಆಡಳಿತ ಮಂಡಳಿ ನಡೆಸಿತ್ತು. ಪರಿಣಾಮ 2005-2006ನೇ ಶೈಕ್ಷಣಿಕ ವರ್ಷದಲ್ಲಿ 'ಪತ್ರಿಕೋದ್ಯಮ'ವನ್ನು ಬಿ.ಎ ಪದವಿಗೆ ಐಚ್ಚಿಕ ವಿಷಯವನ್ನಾಗಿ ಪರಿಚಯಿಸಲಾಯಿತು. ವಿದ್ಯಾರ್ಥಿ ಗಳಿಗೆ ತೀರಾ ಹೊಸದಾಗಿರುವ ಈ ವಿಷಯದ ಕುರಿತು ಅರಿವು ಮೂಡಿಸುವ ಸಲುವಾಗಿ ವಿಭಾಗದ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತು. ಪ್ರಾರಂಭದಲ್ಲೇ ವಿಭಾಗದ ಎಲ್ಲಾ ಚಟುವಟಿಕೆಗಳಿಗೆ ವಿದ್ಯಾಥರ್ಿಗಳು ಉತ್ತಮವಾಗಿ ಸ್ಪಂದಿಸತೊಡಗಿದರು .ತಮ್ಮ ಸ್ಪ್ತಂದನೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುವ ಪ್ರಯತ್ನವನ್ನೂ ಮಾಡಿದರು. ಆ ಪ್ರಯತ್ನದ ಫಲವೇ 'ವಿದ್ಯಾದರ್ಪಣ'. 2006ರಲ್ಲಿ ಪ್ರಾರಂಭಗೊಂಡ ಈ ಪ್ರಯೋಗಿಕ ಪತ್ರಿಕೆ ವಿದ್ಯééಾಥರ್ಿಗಳಲ್ಲಡಗಿದ ಸುಪ್ತ ಬರವಣಿಗೆಯ ಪ್ರತಿಭೆಯನ್ನು ವ್ಯಕ್ತಪಡಿಸಲು ಸೂಕ್ತವೇದಿಕೆಯಾಗಿ ಹೊರಹೊಮ್ಮಿತು. ನಮ್ಮ ವಿದ್ಯಾಥರ್ಿಗಳ ಸಹಕಾರ ಹಾಗೂ ಯುಕ್ತ ಸ್ಪಂದೆಯಿಂದ ಪತ್ರಿಕೆ ಇಂದು ಯಶಸ್ವಯಗಿ ಎರಡು ಸಂಪುಟಗಳನ್ನು ಪೂರೈಸಿದೆ.
ಕೇವಲ ಹದಿಮೂರು ವಿದ್ಯಾಥರ್ಿಗಳಿಂದ ಪ್ರಾರಂಭಗೊಂಡ ನಮ್ಮೀ ವಿಭಾಗ ಪ್ರಸ್ತುತ ನಲವತ್ತಾರು ಯುವ,ಆಕಾಂಕ್ಷಿ ವಿದ್ಯಾರ್ಥಿ ಗಳನ್ನು ಹೊಂದಿದೆ.ಪಠ್ಯವಿಷಯಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಗಿದ್ದು ವಿಭಾಗಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಾಲೇಜು ಕಲ್ಪಿಸಿದೆ.
ವೈಚಾರಿಕ ಪ್ರಜ್ಞೆ ಪತ್ರಿಕೋದ್ಯಮ ವಿದ್ಯಾಥರ್ಿಯಲ್ಲಿರಬೇಕದ ಪ್ರಮುಖ ಗುಣ.ಆತ ತನ್ನ ಸಮಜದ ಆಗುಹೋಗುಗಳನ್ನು ಗಮನಿಸಿ ಅದಕ್ಕೆ ಸೂಕ್ತವಾಗಿ ಸ್ಪಂದಿಸಬೇಕು. ವಿದ್ಯಾರ್ಥಿಗಳ ಸ್ಪಂದನೆಗಳನ್ನು ಹೊರಜಗತ್ತಿಗೆ ತಲುಪಿಸುವ ಮತ್ತೊಂದು ಕಿರು ಪ್ರಯತ್ನವೇ ನಮ್ಮ ನೂತನ ಬ್ಲಾಗ್ 'ಹೊಂಗಿರಣ'.ಈ ಬ್ಲಾಗ್ ವಿದ್ಯಾರ್ಥಿಗಳ ಬರಹ-ಸಂವೇದನೆಗಳನ್ನು ಹೊರಜಗತ್ತಿಗೆ ತಲುಪಿಸುವುದರ ಜತೆ ಅವರ ವೈಚಾರಿಕ ನೆಲೆಗಟ್ಟನ್ನು ಇನ್ನಷ್ಟು ಭದ್ರಗೊಳಿಸುವಲ್ಲಿ ಸಹಾಯಕರಿ.ನಮ್ಮ ಈ ವಿನೂತನ ಪ್ರಯತ್ನ ವಿದ್ಯಾರ್ಥಿಗಳ ಅಂತಃಶಕ್ತಿಗೆ ಧ್ವನಿಯಾಗಲಿ,ಅವರಲ್ಲಡಗಿಹ ಪ್ರತಿಭೆಯಾಗಲಿ,ಹೊಸ ಸಾಧನೆಗಳಿಗೆ ನಾಂದಿ ಹಾಡಲಿ ಎಂಬುದೇ ನಮ್ಮೆಲ್ಲರ ಆಶಯ.
- ಸಂಪಾದಕರು.

ಹೀಗೇ ಸುಮ್ಮನೆ...

ಸ್ನೇಹದ ಪಯಣದಲ್ಲಿ

ಗೆಳೆತನ ವೆಂಬುದು ಒಂದು ಪವಿತ್ರ ಬಂಧನ ಬಿಡಿಸಲಾಗದ ಬಂಧನ, ಏನೇ ಹೇಳಿ ಅದು ಗೆಳೆತನದ ಮಹಿಮೆ (ಆಳ)ವನ್ನು ತಿಳಿಸುತ್ತದೆ. ಗೆಳೆತನಕ್ಕಿಂತ ಮಿಗಿಲಾದದ್ದು ಯಾವುದೂ ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಎಲ್ಲವೂ ಗೆಳೆತನದ ಮೂಲಕ ಪ್ರಾರಂಭವಾಗಿ ಮತ್ತೆ ಬೇರೆ ಬೇರೆ ಸಂಬಂಧಗಳು, ಸಂಬಂಧಿಕರು ಎಂಬುದಕ್ಕೆ ನಾಂದಿಯಾಗುತ್ತದೆ. ಗೆಳೆತನ ಒಂದು ಅದ್ಭುತ ಶಕ್ತಿ ಎಂದೂ ಹೇಳಬಹುದು. ಸಾಯುತ್ತಿರುವ ಅಥವಾ ನರಳುತ್ತಿರುವ ವ್ಯಕ್ತಿಗೆ ಗೆಳೆತನದ ಸ್ವರ್ಶವಾದರೆ ಅವನ ಮುಖದಲ್ಲಿ ಅರುಳುವ ಆ ಮಂದಹಾಸ, ಅವನ ಲವಲವಿಕೆ ಇದಕ್ಕೆ ಸಾಕ್ಷಿ. ಗೆಳೆತನ ಎಂಬುದಿಲ್ಲದ್ದರೆ ಈ ಜಗತ್ತೇ ಇಲ್ಲವೆಂದು ಹೇಳಬಹುದು. ಪ್ರತಿಯೊಂದು, ವ್ಯಕ್ತಿಯ ಪರಿಚಯ, ಅವರ ನಡುವೆ ನಡೆಯುವ ಸಂಭಾಷಣೆ, ಅವರು ಇನ್ನೊಮ್ಮೆ ಸಿಕ್ಕಾಗ ಅವರ ಮುಗುಳು ನಗು, ಅವರು ಮತ್ತೊಮ್ಮೆ ಸಿಕ್ಕಾಗ ಸ್ನೇಹ ಭರಿತ ಮಾತು, ಅನಂತರ ಅವರಿಬ್ಬರ ನಡುವೆ ಒಡಮೂಡುವ ಆತ್ಮೀಯತೆ, ಸ್ನೇಹ ಇವೆಲ್ಲವೂ ಅಗಮನೀಯ. ಕೆಲವರಿಗೆ ತಮ್ಮ ಸ್ನೇಹಿತರು ಎಷ್ಟು ಆತ್ಮೀಯರಾಗಿ ಬಿಡುತ್ತಾರೆಂದರೆ ಅವರ ಮೊದಲ ಭೇಟಿಯೇ ನೆನಪಿರುವುದಿಲ್ಲ. ಯಾಕೆಂದರೆ ಅಷ್ಟೊಂದು ಪ್ರೀತಿ, ವಿಶ್ವಾಸ, ಸ್ನೇಹ ಅವರಲ್ಲಿ ಜನುಮ ಜನುಮದ ಬಂಧನವನ್ನು ಏರ್ಪಡಿಸಿ ಬಿಡುತ್ತದೆ. ಇನ್ನು ಕೆಲವರಿಗೆ ಜಗಳ (ದ್ವೇಷ) ದಿಂದ ಪ್ರಾರಂಭವಾದ ಭೇಟಿಯು ಸ್ನೇಹಕ್ಕೆ ತಿರುಗುವುದೂ ಉಂಟು. ಸ್ನೇಹದಲ್ಲಿ ಹಂಚಿಕೊಳ್ಳುವಿಕೆ, ಮುಖ್ಯ ನೊಂದಾಗ ಸಮಾಧಾನ ಹೇಳುವುದು, ಅವರ ಗುರಿಯನ್ನು ಮುಟ್ಟಲು ಸಹಕರಿಸುವುದು, ಹುರಿದುಂಬಿಸುವಿಕೆ, ಸದಾ ಜೊತೆಯಲ್ಲಿದ್ದು ಸುಃಖ ದುಃಖಗಳಲ್ಲಿ ಪಾಲುದಾರನಾಗುವುದು ಅವಶ್ಯ ಇವೆಲ್ಲ ಇದ್ದಾಗಲೇ ಅಲ್ಲಿ ಆರೋಗ್ಯಕರ ಸ್ನೇಹ ಸಾಧ್ಯ. ಸ್ನೇಹ ಬಂಧನ ಕಠೋರ ಹೃದಯದಲ್ಲೂ ಚಿಗುರೊಡೆಯಲು ಸಾಧ್ಯ. ಅದೂ ಎಲ್ಲರಿಗೂ ಲಭ್ಯ, ಅಂದರೆ ಸ್ನೇಹವನ್ನು ಬಯಸುವ ಮನಸ್ಸು, ಸದಾ ತಮ್ಮ ಪ್ರೀತಿ, ದುಃಖ, ಸಂತೋಷ ಕೆಲವೊಮ್ಮೆ ಸಂತಾಪಗಳನ್ನು ಹಂಚಿಕೊಳ್ಳುವ ಮನಸ್ಸಿರುವವರು ಅತಿ ಬೇಗನೆ ಸ್ನೇಹಿತರನ್ನು ಪಡೆದುಕೊಳ್ಳುತ್ತಾರೆ. ಕೆಲವರಿದ್ದಾರೆ ತಮ್ಮ ದುಃಖ, ತಮ್ಮ ಸಂತಾಪಗಳನ್ನೂ ಇತರರ ಬಗೆಗಿನ ಆಗದ ಹೋಗದ ವಿಷಯಗಳನ್ನೂ ಹೇಳಿಕೊಳ್ಳಲಿಕ್ಕೋಸ್ಕರವಾಗಿ ಸ್ನೇಹಿತರನ್ನು ಹುಡುಕಿಕೊಂಡು ಹೋಗುತ್ತಾರೆ. ಅಂಥಹವರಿಂದ ಇದ್ದ ಸ್ನೇಹಿತರೂ ದೂರವಾಗಿ ಅವರು ಒಂಟಿಯಾಗುವುದು ಜಾಸ್ತಿ. ಸ್ನೇಹದ ಪರಿಚಯ ಮತ್ತು ನಾವು ಅವರನ್ನು ಅರಿತುಕೊಳ್ಳವುದು ಸ್ನೇಹಿತರ ಅಗಲುವಿಕೆಯ ಸಂದರ್ಭ ಬಂದಾಗ ಮಾತ್ರ. ಉದಾಹರಣೆಗೆ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾಥರ್ಿ/ವಿದ್ಯಾಥರ್ಿನಿಯರು ವರ್ಷದ ಕೊನೆಗೆ ಏನೋ ಕಳೆದುಕೊಂಡವರಂತೆ ಇರುವುದು, ತಮ್ಮ ಗೆಳೆಯ/ಗೆಳತಿಯರ ಹಸ್ತಾಕ್ಷರ ಭರಿತ ಪುಸ್ತಕವನ್ನು ನೆನಪಾಗಿಟ್ಟುಕೊಳ್ಳುವುದು, ಯಾವತ್ತೂ ಅವರೊಟ್ಟಿಗಿದ್ದಾಗ ಬಾರದ ಅಳು ಪರೀಕ್ಷೆಯ ಕೊನೆಗೆ ಧುಮ್ಮಿಕ್ಕುವುದು ಇವೆಲ್ಲಾ ಆದರೆ, ಇನ್ನೊಂದೆಡೆ ಹೇಳುವುದಾದರೆ ಆಕಸ್ಮಾತ್ತಾಗಿ ಸಂಭವಿಸಿದ ಗೆಳೆಯರ ಸಾವು ಕೂಡ ಭರಿಸಲಾರದ ನಷ್ಟವಾಗಿ ಬಿಡುತ್ತದೆ. ಗೆಳೆತನ ವೆಂದರೆ ನಾವು ನಮ್ಮೊಳಗೆ ಅವರಿಗಾಗಿಟ್ಟಿರುವ ಅಚ್ಚಳಿಯದ ಸಾವಿರದ ಪ್ರೀತಿ. ಸ್ನೇಹ, ಇದು ಉಕ್ಕಿ ಹರಿಯಬಹುದೇ ಹೊರತು ಎಂದು ಬರಡಾಗದು. ಅವರು ನಮ್ಮಿಂದ ದೂರವಾದಗ ಅವರ ಇರುವಿಕೆ ಮರೆತು ಹೋಗಬಹುದು. ಆದರೆ ಹಿಂದಿನ ಆ ಸುಂದರ ನೆನಪುಗಳು ಮತ್ತು ಅವರ ಮುಖ ಕಾಣಸಿಕ್ಕಾಗ ನಮ್ಮಲ್ಲಾಗುವ ಆನಂದ ಎಂದೆಂದಿಗೂ ಮರೆಯಲಾಗದು. ಗೆಳೆಯರು ನಮ್ಮೊಟ್ಟಿಗಿದ್ದಾಗಿನ ಸಂತೋಷ ಲವಲವಿಕೆ, ಮೋಜು, ಆನಂದ,ಆ ಜೀವಂತಿಕೆ ಅವರಿಲ್ಲದಾಗ ಇರುವುದಿಲ್ಲ ಹೊರ ದೇಶಕ್ಕೂ ಎಲ್ಲೋ ಹೋಗಿ ನೆಲೆಸಿ ತಮ್ಮ ದೇಶಕ್ಕೂ, ಊರಿಗೂ ವಾಪಾಸದಾಗ ಗೆಳೆಯರನ್ನು ನೋಡಿದ ಕೂಡಲೇ ಆ ಉತ್ಸಾಹ ಆನಂದ ಎಲ್ಲಾ ಕಾಣಸಿಗುತ್ತದೆ. (ಸ್ನೇಹಿತ) ಗೆಳೆಯರೊಟ್ಟಿಗೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟ. ಆಗ ತಿಳಿಸಿದಂತೆಯೇ ಅದೊಂದು ಅದ್ಭುತ ಶಕ್ತಿ, ಅದೊಂದು ಶ್ರೇಷ್ಠ ಭಾಂದವ್ಯ. ಗೆಳೆತನವೆಂಬುದು ಇಲ್ಲದಿದ್ದರೆ ಈ ಭೂಮಿಯೊಳಗಿನ ಜೀವರಾಶಿಗಳು ಒಂದಕ್ಕೊಂದು ಕಚ್ಚಾಡಿ, ಜಗಳವಾಡಿ ಸಾಯುತ್ತಿದ್ದವು, ಜೀವರಾಶಿಯ ಬೆಳವಣಿಗೆ ಸಾಮಾನ್ಯ ಮಾತುಕತೆಗಳೂ ಇರುತ್ತಿರಲ್ಲಿಲ್ಲ. ನಮ್ಮ ಪೂರ್ವಜರ ಸ್ನೇಹ ಸೌಹರ್ದತೆಯು ಇಂದಿಗೂ ನಾವು ಕೂಡಿಬಾಳಿದರೆ ಸ್ವರ್ಗ ಸುಖ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹೇಳಿ ಅವರ ಸ್ನೇಹದ ಬಲವನ್ನು ತಿಳಿದುಕೊಳ್ಳುವಂತಾಗಿದೆ. ಈಗ ರಾಜಕೀಯದಲ್ಲೇ ಇರಲಿ, ವ್ಯಾಪರ ವ್ಯವಹಾರವಾಗಿರಲಿ ಯಾವ ದೇಶವೂ ಬೆಳೆಯುತ್ತಿರಲಿಲ್ಲ.

- ಸೌಮ್ಯ

ಕವನ


ಸಾಧನೆ

ಸಾಧನೆಯ ಶಿಖರಕ್ಕೆ ಹಲವಾರು ಮೆಟ್ಟಿಲು
ಜಾಗ್ರತೆಯ ಹೆಜ್ಜೆಗೆ ನೀನಾಗು ಶಕ್ತಿ
ಪ್ರತಿಯೊಬ್ಬರ ಅಂತರಾಳದಲ್ಲಿ
ಮಲಗಿದೆ ಆತ್ಮವಿಶ್ವಾಸ
ಬಡಿದೆಬ್ಬಿಸು ಸರಿಯಾದ ಸಮಯದಲ್ಲಿ
ಸೋಲಿಲ್ಲದವರ್ಯಾರಿಲ್ಲ ಜಗದಲ್ಲಿ
ಸೋಲೆಗೆಲುವಾಗುವುದು ಜೀವನದಲ್ಲಿ
ಸೋಲಿಗೆ ಸಾವಲ್ಲ ಪರಿಹಾರವಿಲ್ಲ
ಪುಟ್ಟ ಹೆಜ್ಜೆಯ ನೀಡುವಾಗ ನೀ
ಬಿದ್ದೆದ್ದೆ ಎಷ್ಟು ಬಾರಿ
ಹಾಗೆಂದು ನಡೆಯದೆ ಕುಳಿತೆಯಾ ನೀ
ಹಗಲಿರುಳು ಬಂದು ಹೋಗುವುದು ಹೇಗೋ
ಜೀವನದ ಸುಖ ದುಃಖವು ಹಾಗೇ
ಅದನರಿಯಾ ಬೇಕು ಓ ಮನವೇ
ಜಯದ ಹಾದಿಯಲ್ಲಿ ನೂರಾರು ಅಡೆತಡೆ
ಅಡೆತಡೆಯ ಭೇದಿಸಿ ನಡೆ ನೀ ಮುಂದೆ
ಸಾಧನೆಯ ಶಿಖರವೇರು ಹರುಷದಲಿ
ಮುಂದಿಟ್ಟ ಹೆಜ್ಜೆಯ ಹಿಮ್ಮೆಟ್ಟ ಬೇಡ
ನಿನ್ನ ಪರಿಶ್ರಮಕೆ ದೊರಕುವುದು ಫಲ
ನಿನ್ನ ಬಾಳಾಗುವುದು ಬಂಗಾರ

- ವಾಸು (ದ್ವಿತೀಯ ಬಿ.ಎ)


ಜೀವನ

ಮುಂ ಜಾನೆಯ ಇಬ್ಬನಿಯಂತೆ
ಹಕ್ಕಿಯ ಇಂಪಾದ ಹಾಡಿನಂತೆ
ಜೇನಿನ ಸವಿಯಂತೆ
ಹೊಳೆಯುವ ನಕ್ಷತ್ರದಂತೆ
ಮುದ್ದು ಕಂದನ ನಗುವಿನಂತೆ
ಸೊಗಸಾಗಿರಲಿ ಈ ಜೀವನ ಪಯಣ
ಐಕ್ಯತೆ
ಬಾನಿನಿಂದ ಇಳಿದ ವರ್ಷಧಾರೆ
ಚಿಗುರು ತಂದಿತು ಭೂಮಿಗೆ
ನೆಲದ ತಂಪು ಗಂಥಗಾಳಿ
ಮಣ್ಣಿನ ಕಂಪ ಹೊಮ್ಮಿಸಿತು
ಕಾನನದಿ ಅರಳಿದ ಹೂವು
ಹೊಸ ಸುಗಂಧ ನೀಡಿತು ಮನಕೆ
ಭಿನ್ನ ಭಿನ್ನ ಹೃದಯದ ಮಂತ್ರ
ಏಕತೆಯನ್ನು ಸಾರಿತು ಬಾಳಿಗೆ
- ಶರಣ್ಯ
(ದ್ವಿತೀಯ ಬಿ.ಎ)


ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ


`ಜಲ' ಈ ಎರಡಕ್ಷರದ ಪದ ಕೇವಲ ನೀರಲ್ಲ! ಅದು ಜೀವ ಕೊಡುವ ಶಕ್ತಿ. ಆ ಕಾರಣಕ್ಕೇ ಅದಕ್ಕೆ ಜೀವಜಲ ಎಂಬ ಹೆಸರು. ಈ ಜಲವನ್ನು ಆಯಾ ಪ್ರದೇಶ, ಭಾಷೆಯಲ್ಲಿ ವಿಭಿನ್ನವಾಗಿ ಕರೆಯಲಾಗಿದೆ. ಕನ್ನಡದಲ್ಲಿ ನೀರು, ಕೊಂಕಣಿಯಲ್ಲಿ ಉದಕ್, ತುಳುವಿನಲ್ಲಿ ನೀರ್, ಆಂಗ್ಲಭಾಷೆಯಲ್ಲಿ ವಾಟರ್, ಹಿಂದಿಯಲ್ಲಿ ಪಾನಿ, ಮಲೆಯಾಳಂನಲ್ಲಿ ವೆಳ್ಳಂ ಹೀಗೆ ಕರೆಯಲಾಗುತ್ತದೆ. ನೀರಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯುವುದು ಪ್ರಸಕ್ತ ದಿನಗಳಲ್ಲಿ ಅನಿವಾರ್ಯ. ತನ್ಮೂಲಕ ಜಲ ಸಂರಕ್ಷಣೆಯನ್ನು ಪ್ರತಿಯೊಬ್ಬನೂ ಕೈಗೊಳ್ಳಬೇಕಾದ ಸ್ಥಿತಿಯೂ ಇಂದೊದಗಿ ಬಂದಿದೆ.
ದೈನಂದಿನ ಜನಜೀವನದ ಕಾರ್ಯಚಟುವಟಿಕೆಗಳಲ್ಲಿ ನೀರಗೆ ಪ್ರಮುಖ ಸ್ಥಾನವಿದೆ. ನೀರಿಲ್ಲದೆ ಪ್ರಾಣಿ, ಪಕ್ಷಿ ಜೀವಸಂಕುಲಗಳು ಬದುಕಲು ಸಾಧ್ಯವೇ ಇಲ್ಲ. ಆದರೆ ಇಂದು ಈ ಪ್ರಾಮುಖ್ಯವಾದ ನೀರಿಗೆ ತೊಂದರೆಯೊದಗುವು ಅಪಾಯಕಾರಿ ಸ್ಥಿತಿ ಬಂದೊದಗಿದೆ.
ಮಾನವನ ಅತಿಬುದ್ದಿವಂತಿಕೆಯಿಂದ ಪರಿಸರದಲ್ಲಿ ಅಸಮತೋಲನವುಂಟಾಗಿದೆ. ಇದು ನೇರವಾಗಿ ನೀರಿನ ಮೇಲೂ ಪರಿಣಾಮ ಬೀರತೊಡಗಿದೆ. ಇಂದು ನಿರಂತರ ಪರಿಸರ ಮಾಲಿನ್ಯ, ಪರಿಸರ ಹಾನಿ ನಡೆಯುತ್ತಿದೆ. ಬೃಹದಾಕಾರದ ಕಟ್ಟಡಗಳ ನಿಮರ್ಾಣ, ಉದ್ಯಮಗಳ ಸ್ಥಾಪನೆಗಾಗಿ ಹಸಿರ ಕಾಡಿಗೆ ಕೊಡಲಿಯೇಟು ಬೀಳಲಾರಂಭಿಸಿದೆ. ಇದರಿಂದಾಗಿ ಸರಿಯಾದ ಸಂದರ್ಭದಲ್ಲಿ ಮಳೆಯಿಲ್ಲ, ಮಳೆಯಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ಆಹಾರ ಧಾನ್ಯಗಳಿಲ್ಲ ಎಂಬಂತ ಸ್ಥಿತಿ ಬಂದೊದಗಿದೆ. ಕಾಲ ಕಾಲಕ್ಕೆ ಮಳೆಯಾಗದೆ ಕೃಷಿಕರು ತೊಂದರೆಯನ್ನನುಭವಿಸುವಂತಾಗಿದೆ.
ಕಟ್ಟಡ ಕಾಮಗಾರಿ, ಇತರೆ ಕಾಮಗಾರಿಗಾಗಿ ನೀರಿನ ಅತಿಯಾದ ಬಳಕೆಯಿಂದಾಗುತ್ತಿದೆ. ನೀರನ್ನು ಹಿತ ಮಿತವಾಗಿ ಬಳಸಬೇಕು. ಜಲ ಮಾಲಿನ್ಯವನ್ನು ತಡೆಗಟ್ಟಬೇಕು. ಭೂಮಿಯಲ್ಲಿ ನೀರಿಂಗುವಂತೆ ಮಾಡಿ ಜಲ ಸಂರಕ್ಷಣೆಗೆ ನಾವು ಸಿದ್ಧರಾಗಬೇಕು. ಅಂತರ್ಜಲದ ಮಟ್ಟ ಏರಿಸುವಂತೆ ನಾವು ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಾಗಿದೆ. ಕಾಯರ್ೋನ್ಮುಖರಾಗಬೇಕಾಗಿದೆ.
- ಬಿನ್ಸಿ ವರ್ಗೀಸ್.


ಚಿಂತನೆ


ಭಾರತದ ಆರ್ಥಿಕ ಸ್ಥಿತಿ - ಗತಿ

ದೇ ಶದ ಆರ್ಥಿಕ ಸ್ಥಿತಿ ಬಹಳ ಚಿಂತಾಜನಕ. ಕಾರಣ ಹಣದುಬ್ಬರ. ಹಣದುಬ್ಬರದಿಂದಾಗಿ ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಇದರಿಂದ ಬಡಜನರು ಮತ್ತು ಮಧ್ಯಮ ವರ್ಗದವರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಣದುಬ್ಬರದ ಪ್ರಸ್ತುತ ಸ್ಥಿತಿ ಶೇ.11.85ರಷ್ಟು ಏರಿಕೆ ಕಂಡಿದೆ. ಇದು ಕಳೆದ 13ವರ್ಷಗಳಲ್ಲಿಯೇ ಅತೀ ಹೆಚ್ಚಿನ ಏರಿಕೆಯಾದಂತಾಗಿದೆ.
ಚಿಲ್ಲರೆ ಹಾಗೂ ಸಗಟು ಮಾರಾಟಗಾರರು ಬೆಲೆ ಏರಿಕೆಯ ಎಲ್ಲಾ ಭಾರವನ್ನು ಜನರ ಮೇಲೆ ವಗರ್ಾಯಿಸುತ್ತಿದ್ದಾರೆ. ನಮ್ಮ ಹಣಕ್ಕೆ ಸಿಗುವ ವಸ್ತುಗಳ ಪ್ರಮಾಣ ತನ್ಮೂಲಕ ಕಡಿಮೆಯಾಗುತ್ತಿದೆ. ಬ್ಯಾಂಕ್ ಠೇವಣಿ, ಷೇರು, ಮೊದಲಾದವುಗಳ ಲಾಭಕ್ಕೆ ಇದರಿಂದಾಗಿ ಹೊಡೆತ ಬೀಳುತ್ತಿದೆ. ಆಥರ್ಿಕ ಬೆಳವಣಿಗೆ ಕುಂಠಿತವಾಗುತ್ತಿದೆ. ಹೊಸ ಸಾಲ ಸುಲಭದಲ್ಲಿ ದೊರೆಯದಾಗಿದೆ. ಉಳಿತಾಯದ ಠೇವಣಿಗೆಗೆ ಸೂಕ್ತ ಬೆಲೆಯಿಲ್ಲದಾಗಿದೆ.
ಸಕರ್ಾರಿ ಅನುತ್ಪಾದಕರ ಖಚರ್ುಗಳ ಬೇಡಿಕೆ ಸೃಷ್ಠಿಸಿದ ಪರಿಣಾಮ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಬಹುತೇಕ ಶ್ರೀಮಂತ ರಾಷ್ಟ್ರಗಳು ಹಣದುಬ್ಬರದ ಪ್ರಮಾಣವನ್ನು ಗ್ರಾಹಕರ ದರ ಸೂಚ್ಯಂಕದ ಉಪಯೋಗದ ಮೇಲೆ ಲೆಕ್ಕ ಹಾಕುತ್ತಿದ್ದರೆ, ದೇಶದಲ್ಲಿ ಸಗಟು ಸೂಚ್ಯಂಕ ದರವನ್ನು ಉಪಯೋಗಿಸಿ ಹಣದುಬ್ಬರದ ಲೆಕ್ಕ ಹಾಕಲಾಗುತ್ತಿದೆ.
ಸಗಟು ಸೂಚ್ಯಂಕ ದರವೆಂದರೆ ಸಗಟು ಮಾರುಕಟ್ಟೆಯಲ್ಲಿ ಸರಕುಗಳ ಸರಾಸರಿ ಬೆಲೆ ಹಾಗೂ ಮಾರಾಟದ ಪ್ರಮಾಣವನ್ನು ಲೆಕ್ಕ ಹಾಕಲು ಬಳಸುವ ವಿಧಾನವಾಗಿದೆ. ಭಾರತದಲ್ಲಿ ಹಣದುಬ್ಬರ 1995ರ ನಂತರ ಶೇ.8ರಷ್ಟಿತ್ತು. 1997ರಲ್ಲಿ ಶೇ.4.6ಕ್ಕೆ ಇಳಿಕೆ ಕಂಡಿತು. 2000ನೇ ಇಸವಿಯಲ್ಲಿ ಅತೀ ಕಡಿಮೆ 3.3 ಶೇಕ್ಕೆ ಇದು ಇಳಿಯಿತು. 2005ರ ನಂತರ ಏರಿಕೆಯಾಗುತ್ತಲೇ ಸಾಗಿದ ಹಣದುಬ್ಬರವು ಪ್ರಸಕ್ತ ಸಾಲಿನಲ್ಲಿ 11.85ಶೇ ಏರಿಕೆ ಕಂಡಿತು.
- ಈಶ ಪ್ರಸನ್ನ.

ಮಹಿಳೆ...




ಸ್ತ್ರೀ ಮತ್ತು ಉದ್ಯೋಗ

`ಉದ್ಯೋಗಂ ಪುರಷ ಲಕ್ಷಣಂ' ಎಂಬುದು ಸಾಮಾನ್ಯ. ಯಾವುದೇ ಉದ್ಯೋಗವಾದರೂ ಅದು ಪುರುಷರಿಗಷ್ಟೇ ಸೀಮಿತ ಎಂಬಂತ ಮಾತು ಕೇಳಿಬರುತ್ತಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಮಾತು ಸುಳ್ಳಾಗಿದೆ. `ಉದ್ಯೋಗಂ ಸ್ತ್ರೀ ಲಕ್ಷಣಂ' ಎಂಬಂತಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಬೇರೆಕಡೆಗಳಿಗೆ ಹೋಗಿ ಉದ್ಯೋಗ ಮಾಡುವುದನ್ನು ನಮ್ಮ ಸಮಾಜ ತಾತ್ಸಾರ ಭಾವನೆಯಿಂದ ಕಾಣುತ್ತಿತ್ತು. ಹಿಂದೆ ಸ್ತ್ರೀ ಕೇವಲ ಅಡುಗೆ ಮನೆಗಷ್ಟೇ ಸೀಮಿತ ಎಂಬತಿದ್ದಳು. ಗಂಡನ ಸೇವೆಮಾಡುತ್ತಾ ಮನೆ, ಮಕ್ಕಳು , ಸಂಸಾರವನ್ನು ನೋಡುವುದು ಆಕೆಯ ಕೆಲಸಎಂಬಂತಿತ್ತು. ಹೀಗಾಗಿ ಸ್ತ್ರೀ ಉದ್ಯೋಗ ಮಾಡುವುದು ಅವಲಕ್ಷಣವೆನಿಸುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸ್ತ್ರೀ ಜೀನವದ ಎಲ್ಲಾ ರಂಗಗಳ ಉದ್ಯೋಗದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾಳೆ.
ಸ್ತ್ರೀ ಸ್ವಾವಲಂಬಿಯಾಗಿದ್ದಾಳೆ. ಡ್ರೈವರ್ ಸೀಟಿನಲ್ಲಿ ಕುಳಿತು ಅಟೋ ಓಡಿಸುತ್ತಾಳೆ... ಪುರುಷರಂತೆ ಬಸ್ಸುಗಳಲ್ಲಿ ಟಿಕೇಟ್ ನೀಡುತ್ತಾಳೆ... ಇಷ್ಟೇ ಯಾಕೆ ದಕ್ಷ ಪೊಲೀಸ್ ಅಧಿಕಾರಿಯಾಗಿಯೂ ಕಾಣಿಸಿಕೊಳ್ಳುತ್ತಾಳೆ... ರಾಷ್ಟ್ರಪತಿಯಂತಹ, ಪ್ರಧಾನಿಯಂತಹ ಹುದ್ದೆಯನ್ನೂ ಸಮರ್ಥಕವಾಗಿ ನಿರ್ವಹಿಸಿದ್ದಾಳೆ.
ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಅನಿವಾರ್ಯ. ಶಿಕ್ಷಣ ಸಂಸ್ಥೆಗಳಲ್ಲಿ, ರಾಜಕೀಯ ರಂಗದಲ್ಲಿ, ಬಾಹ್ಯಾಕಾಶದಲ್ಲಿ, ಸಂಶೋಧನಾ ಕ್ಷೇತ್ರದಲ್ಲಿ, ಗೃಹ ಕೈಗಾರಿಕೆಯಲ್ಲಿ ಹೀಗೆ ಪುರುಷನಿಗೆ ಸಮಾನಾಗಿ ದುಡಿಯುತ್ತಿದ್ದಾಳೆ. ಇದರಿಂದಾಗಿ ಸ್ತ್ರೀ ಶೋಷಣೆ ಒಂದಷ್ಟರ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.
ಕಾವ್ಯಶ್ರೀ
ಹಲೋ...ಕೇಳಿಸ್ತಿದ್ಯಾ...


ಹೌದು... ಈ ದೂರವಾಣಿ ಅಷ್ಟೊಂದು ಫೇಮಸ್... ದೂರವಾಣಿ ಎಂಬುದು ಒಂದು ಶ್ರಾವ್ಯ ಮಾಧ್ಯಮ. ಇದು ಕ್ರಿಯಾತ್ಮಕ ಸಂವಹನದ ಒಂದು ಮಾಧ್ಯಮ. ಇದನ್ನು ವಿದೇಶಿ ವಿಜ್ಞಾನಿ ಅಲೆಗ್ಸಾಂಡರ್ ಗ್ರಹಾಂಬೆಲ್ ಸಂಶೋಧಿಸಿದನು. ಇದರ ಮೂಲಕ ಒಬ್ಬ ವ್ಯಕ್ತಿ ಇನ್ನೊಬ್ಬನಲ್ಲಿ ತರಂಗಾಂತರ ಸಂವಹನದ ಮೂಲಕ ಸಂಪಕರ್ಿಸಲು ಸಾಧ್ಯ. ಇತ್ತೀಚೆನ ದಿನಗಳಲ್ಲಿ ಈ ಮಾಧ್ಯಮದ ಒಂದು ಅನಿವಾರ್ಯವೆಂಬಂತಾಗಿದೆ. ಅಷ್ಟರ ಮಟ್ಟಿಗೆ ದೂರವಾಣಿ ಫೇಮಸ್!
ಅಗತ್ಯ ವಿಚಾರಗಳನ್ನು ತಿಳಿಸಲು, ಸುದ್ದಿ, ಮಾಹಿತಿಗಳನ್ನು, ವಾತರ್ೆಗಳನ್ನು ತಿಳಿಸಲು ಈ ದೂರವಾಣಿ ಅವಶ್ಯಕವೆಂಬಂತಾಗಿದೆ.
ಇಂದು ದೂರವಾಣಿ ಇಲ್ಲದ ಮನೆಯಿಲ್ಲ. ಕಚೇರಿ, ಮಾಧ್ಯಮ ಸಂಸ್ಥೆ, ಸರಕಾರಿ ಸಂಸ್ಥೆ, ಶಾಲೆ, ಕಾಲೇಜು, ಗೂಡಂಗಡಿ ಹೀಗೆ ಎಲ್ಲೆಂದರೆಲ್ಲಿ ದೂರವಾಣಿಗಳು ಬೇಕೇ ಬೇಕು. ದೂರವಾಣಿಗಳನ್ನಿರಿಸಿ ಉದ್ಯಮವನ್ನೇ ಮಾಡುತ್ತಾರೆ. ನಾಲ್ಕಾರು ಫೋನ್ಗಳನ್ನು ಅಳವಡಿಸಿ `ದೂರವಾಣಿ ಬೂತ್' ನಿಮರ್ಿಸಿ ಜೀವನ ಸಾಗಿಸುವ ಮಂದಿ ಅದೆಷ್ಟೋ...
ಈಗಿನ ಕಾಲದಲ್ಲಿ ದೂರವಾಣಿಯ ಉಪಕರಣದಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಈ ನಿಟ್ಟಿನಲ್ಲೂ ಸಾಕಷ್ಟು ಸಂಶೋಧನೆಗಳು ನಡೆದಿವೆ. ಹಿಂದಿನ ಕಾಲದ ದೂರವಾಣಿಗಳಿಗಿಂತ ಇಂದಿನ ದೂರವಾಣಿಗಳು ವೈವಿಧ್ಯಮಯವಾಗಿ ಕಂಡುಬರುತ್ತವೆ. ಅಷ್ಟೇ ಅಲ್ಲದೆ ಮೊಬೈಲ್ ದೂರವಾಣಿಯ ಆವಿಷ್ಕಾರವೂ ಇಂದಾಗಿದೆ.
ರೋಶನ್ ಬಿ. ಸುರತ್ಕಲ್.